Liquor Price Hike: ನಾನು ಬಡವ ಸ್ವಾಮಿ ಎಣ್ಣೆ ರೇಟ್ ಕಡಿಮೆ ಮಾಡಿ

Edited By: ಕಿರಣ್ ಹನುಮಂತ್​ ಮಾದಾರ್

Updated on: Jul 08, 2023 | 3:07 PM

ಬಜೆಟ್​ನಲ್ಲಿ ಆಲ್ಕೋಹಾಲ್​ ಬೆಲೆ ಏರಿಕೆಗೆ ರಾಜ್ಯಾದ್ಯಂತ ಮದ್ಯಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಲೆ ಏರಿಕೆಯಿಂದ ಮದ್ಯಪ್ರಿಯರಿಗೆ ಆಘಾತವಾಗಿದ್ದು, ಹಾವೇರಿಯಲ್ಲಿ ಮದ್ಯಪ್ರಿಯರು ‘ನಾನು ಬಡವ ಸ್ವಾಮಿ, ಎಣ್ಣೆ ರೇಟ್​ ಕಡಿಮೆ ಮಾಡಿ ಎಂದು ತನ್ನ ಅಳಲನ್ನ ತೋಡಿಕೊಂಡಿದ್ದಾರೆ.

ಹಾವೇರಿ: ಕಾಂಗ್ರೆಸ್​ ನಾಯಕರುಗಳು ಚುನಾವಣಾ ಹಿಂದೆ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳನ್ನು ಒಂದೊಂದಾಗಿ ಜಾರಿ ಮಾಡುತ್ತಾ ಬರುತ್ತಿದೆ. ಅದರಂತೆ ನಿನ್ನೆ(ಜು.7) ನೂತನ ಸರ್ಕಾರದ ಮೊದಲ ಬಜೆಟ್​ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ 14ನೇ ಬಜೆಟ್​ನ್ನು ಮಂಡನೆ ಮಾಡಿದರು. ಇದಕ್ಕೆ ವಿರೋಧ ಪಕ್ಷಗಳ ನಾಯಕರುಗಳು ತೀವ್ರ ಟೀಕೆ ಮಾಡುತ್ತಿದ್ದು, ಈ ಮಧ್ಯೆ ಆಲ್ಕೋಹಾಲ್​ ಬೆಲೆ ಏರಿಕೆಗೆ ರಾಜ್ಯಾದ್ಯಂತ ಮದ್ಯಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೌದು ಬೆಲೆ ಏರಿಕೆಯಿಂದ ಮದ್ಯಪ್ರಿಯರಿಗೆ ಆಘಾತವಾಗಿದ್ದು, ಹಾವೇರಿ(Haveri)ಯಲ್ಲಿ ಮದ್ಯಪ್ರಿಯರು ‘ನಾನು ಬಡವ ಸ್ವಾಮಿ, ಎಣ್ಣೆ ರೇಟ್​ ಕಡಿಮೆ ಮಾಡಿ, ಅದ್ಯಾಕೆ ಹೆಚ್ಚಾಯ್ತು ಗೊತ್ತಾಗುತ್ತಿಲ್ಲ ಎಂದು ನೋವುನ್ನ ತೋಡಿಕೊಂಡಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 08, 2023 03:06 PM
Follow Us
Suraj Mahaveer Utture

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More