ನಬಾರ್ಡ್​ ಸಾಲದ ಮೊತ್ತವನ್ನು ಎಲ್ಲ ರಾಜ್ಯಗಳಿಗೆ ಕಡಿಮೆ ಮಾಡಲಾಗಿದೆ ಅನ್ನೋದು ಕೇಂದ್ರದ ಸಮರ್ಥನೆ: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ

Updated on: Nov 29, 2024 | 4:56 PM

ರೂ. 5 ಲಕ್ಷದವರೆಗ ಸಾಲವನ್ನು ರಾಜ್ಯಸರ್ಕಾರ ಬಡ್ಡಿರಹಿವಾಗಿ ನೀಡುತ್ತದೆ, ಅದು ನಿಂತುಬಿಟ್ಟರೆ ಕೃಷಿ ಉತ್ಪನ್ನ ಕಡಿಮೆಯಾಗಿ ರೈತರು ಕಂಗಾಲಾಗುತ್ತಾರೆ, ಸಾಲಕ್ಕಾಗಿ ಖಾಸಗಿ ಲೇವಾದೇವಿಯವರ ಮೊರೆ ಹೋಗಿ ಶೋಷಣೆಗೊಳಗಾಗುತ್ತಾರೆ, ನಬಾರ್ಡ್ ರಾಜ್ಯಕ್ಕೆ ನೀಡುವ ಸಾಲದ ಮೊತ್ತ ಹೆಚ್ಚಿಸದಿದ್ದರೆ ಅಂತಿಮವಾಗಿ ತೊಂದರೆ ಎದುರಿಸೋದು ರೈತಾಪಿ ಸಮುದಾಯ ಎಂದು ಸಿದ್ದರಾಮಯ್ಯ ಹೇಳಿದರು.

ದೆಹಲಿ: ನಬಾರ್ಡ್ ನಿಂದ ರಾಜ್ಯಕ್ಕೆ ಸಿಗುವ ಸಾಲದ ಮೊತ್ತ ಕಡಿಮೆಯಾಗಿರುವುದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಕ್ಕಿದ್ದಂತೆ ಕೋಪಗೊಂಡು ನಂತರ ತಾಳ್ಮೆಯಿಂದ ಮಾತಾಡಿದರು. ನಬಾರ್ಡ್ ನಿಂದ ಸಿಗುತ್ತಿದ್ದ ಸಾಲದ ಮೊತ್ತವನ್ನು ಶೇಕಡ 58 ರಷ್ಟು ಕಡಿಮೆ ಮಾಡಿದ್ದಾರೆ, ಎಲ್ಲ ರಾಜ್ಯಗಳಿಗೂ ಕಡಿಮೆ ಮಾಡಿದ್ದೇವೆ, ಬೇರೆ ವಾಣಿಜ್ಯ ಬ್ಯಾಂಕ್​ಗಳು ಸಾಲ ನೀಡುತ್ತವೆಯೆಲ್ಲ ಅನ್ನೋದು ಕೇಂದ್ರದ ವಾದ, ಆದರೆ ಇದರಿಂದ ಸಂಕಷ್ಟಕ್ಕೆ ಒಳಗಾಗೋರು ರೈತರು, ಅವರಿಗೆ ಬಡ್ಡಿರಹಿತ ಸಾಲ ಸಿಗದಂತಾಗುವ ಸ್ಥಿತಿ ಹಲವು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಮೋದಿ ಭೇಟಿಯಾದ ಸಿದ್ದರಾಮಯ್ಯ: ಪ್ರಧಾನಿ ಮುಂದೆ ಸಿಎಂ ಇಟ್ಟ ಬೇಡಿಕೆಗಳೇನು..?

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.