AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯ ಬಿಜೆಪಿ ಸರ್ಕಾರ ದಕ್ಷವಾಗಿರುವುದರಿಂದಲೇ ಪಕ್ಷದ ಶಾಸಕರ ಮನೆಗಳ ಮೇಲೂ ಲೋಕಾಯುಕ್ತ ದಾಳಿ ನಡೆಯುತ್ತಿವೆ: ಸಿಟಿ ರವಿ

ರಾಜ್ಯ ಬಿಜೆಪಿ ಸರ್ಕಾರ ದಕ್ಷವಾಗಿರುವುದರಿಂದಲೇ ಪಕ್ಷದ ಶಾಸಕರ ಮನೆಗಳ ಮೇಲೂ ಲೋಕಾಯುಕ್ತ ದಾಳಿ ನಡೆಯುತ್ತಿವೆ: ಸಿಟಿ ರವಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Mar 03, 2023 | 3:21 PM

Share

ಮರಳು ದಂಧೆಯಲ್ಲಿ ರಾಜ್ಯ ಬೊಕ್ಕಸಕ್ಕೆ ರೂ 8,000 ಕೋಟಿ ನಷ್ಟವಾಗಿದೆ ಎಂದು ನ್ಯಾಯಮೂರ್ತಿ ಕೆಂಪಣ್ಣನವರ ಆಯೋಗ ವರದಿ ನೀಡಿದೆ, ಅದನ್ನು ಕದ್ದವರು ಯಾರು ಎಂದು ರವಿ ಪ್ರಶ್ನಿಸಿದರು.

ಚಿಕ್ಕಮಗಳೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ (BJP Government) ದಕ್ಷ ಹಾಗೂ ಪ್ರಾಮಾಣಿಕವಾಗಿರುವುದಕ್ಕೆ ಲೋಕಾಯುಕ್ತ ಸಂಸ್ಥೆ (Lokayukta) ಪುನಃ ಅಸ್ತಿತ್ವಕ್ಕೆ ಬಂದಿದೆ ಮತ್ತು ಬಿಜೆಪಿ ಶಾಸಕರ (MLAs) ಮನೆಗಳ ಮೇಲೂ ಅದರ ಅಧಿಕಾರಿಗಳ ದಾಳಿ ನಡೆಯತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸ್ಥಳೀಯ ಶಾಸಕರು ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅನೇಕ ಭ್ರಷ್ಟ ಆಧಿಕಾರಿಗಳಿಗೆ ಎಸಿಬಿ ಮೂಲಕ ಕ್ಲೀನ್ ಚಿಟ್ ನೀಡಲಾಗಿತ್ತು ಎಂದರು. ಮರಳು ದಂಧೆಯಲ್ಲಿ ರಾಜ್ಯ ಬೊಕ್ಕಸಕ್ಕೆ ರೂ 8,000 ಕೋಟಿ ನಷ್ಟವಾಗಿದೆ ಎಂದು ನ್ಯಾಯಮೂರ್ತಿ ಕೆಂಪಣ್ಣನವರ ಆಯೋಗ ವರದಿ ನೀಡಿದೆ, ಅದನ್ನು ಕದ್ದವರು ಯಾರು ಎಂದು ರವಿ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ