AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂಗೆ ಲಾಠಿಯಿಂದ ಹೊಡೆದವ್ನು ಸಸ್ಪೆಂಡ್​ ಆಗಬೇಕು, ಸಿಡಿದೆದ್ದ ಯುವತಿ

ನಂಗೆ ಲಾಠಿಯಿಂದ ಹೊಡೆದವ್ನು ಸಸ್ಪೆಂಡ್​ ಆಗಬೇಕು, ಸಿಡಿದೆದ್ದ ಯುವತಿ

ರಮೇಶ್ ಬಿ. ಜವಳಗೇರಾ
|

Updated on: Sep 08, 2025 | 8:52 PM

Share

ಮದ್ದೂರು ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕಲ್ಲು ತೂರಾಟ ಪ್ರಕರಣ ತೀವ್ರ ಸ್ವರೂಪ ಪಡೆದಿದ್ದು, ಹಿಂದೂ ಕಾರ್ಯಕರ್ತರು ಸಹ ಪ್ರತಿಭಟನೆ ನಡೆಸಿ ಆಕ್ರೋಶ ಹಾಕಿದ್ದಾರೆ. ಆದ್ರೆ, ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಇದಕ್ಕೆ ಆಕ್ರೋಶಗಳು ವ್ಯಕ್ತವಾಗಿವೆ. ಇನ್ನು ಲಾಠಿ ಚಾರ್ಜ್ ವೇಳೆ ಪೊಲೀಸ್ ಒಬ್ಬರು ಜ್ಯೋತಿ ಎನ್ನುವ ಯುವತಿಗೆ ಬಲವಾಗಿ ಹೊಡೆದಿದ್ದಾರೆ. ಇದರಿಂದ ಜ್ಯೋತಿ ನೋವಿನಲ್ಲೇ ರಸ್ತೆ ಮೇಲೆ ಕುಳಿತು ಗೋಳಾಡಿದ್ದಾಳೆ. ಇನ್ನು ಲಾಠಿ ಏಟಿಗೆ ಆಕ್ರೋಶಗೊಂಡಿರುವ ಜ್ಯೋತಿ, ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾಳೆ. ಹೊಡೆದ ಪೊಲೀಸ್ ಸಸ್ಪೆಂಡ್ ಆಗಬೇಕೆಂದು ಪಟ್ಟು ಹಿಡಿದಿದ್ದಾಳೆ.

ಮಂಡ್ಯ, (ಸೆಪ್ಟೆಂಬರ್ 08): ಮದ್ದೂರು ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕಲ್ಲು ತೂರಾಟ ಪ್ರಕರಣ ತೀವ್ರ ಸ್ವರೂಪ ಪಡೆದಿದ್ದು, ಹಿಂದೂ ಕಾರ್ಯಕರ್ತರು ಸಹ ಪ್ರತಿಭಟನೆ ನಡೆಸಿ ಆಕ್ರೋಶ ಹಾಕಿದ್ದಾರೆ. ಆದ್ರೆ, ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಇದಕ್ಕೆ ಆಕ್ರೋಶಗಳು ವ್ಯಕ್ತವಾಗಿವೆ. ಇನ್ನು ಲಾಠಿ ಚಾರ್ಜ್ ವೇಳೆ ಪೊಲೀಸ್ ಒಬ್ಬರು ಜ್ಯೋತಿ ಎನ್ನುವ ಯುವತಿಗೆ ಬಲವಾಗಿ ಹೊಡೆದಿದ್ದಾರೆ. ಇದರಿಂದ ಜ್ಯೋತಿ ನೋವಿನಲ್ಲೇ ರಸ್ತೆ ಮೇಲೆ ಕುಳಿತು ಗೋಳಾಡಿದ್ದಾಳೆ. ಇನ್ನು ಲಾಠಿ ಏಟಿಗೆ ಆಕ್ರೋಶಗೊಂಡಿರುವ ಜ್ಯೋತಿ, ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾಳೆ. ಹೊಡೆದ ಪೊಲೀಸ್ ಸಸ್ಪೆಂಡ್ ಆಗಬೇಕೆಂದು ಪಟ್ಟು ಹಿಡಿದಿದ್ದಾಳೆ.