Sign In

By signing in or creating an account, you agree with Associated Broadcasting Company's Terms & Conditions and Privacy Policy.

Sumalatha Ambareesh: ಸಂಸದೆ ಸುಮಲತಾ ಅಂಬರೀಷ್ ಕಾಂಗ್ರೆಸ್​ನೆಡೆ ಪ್ರದರ್ಶಿಸುತ್ತಿರುವ ಮೃದು ಧೋರಣೆ ಅಚ್ಚರಿ ಹುಟ್ಟಿಸುತ್ತದೆ!

Sumalatha Ambareesh: ಸಂಸದೆ ಸುಮಲತಾ ಅಂಬರೀಷ್ ಕಾಂಗ್ರೆಸ್​ನೆಡೆ ಪ್ರದರ್ಶಿಸುತ್ತಿರುವ ಮೃದು ಧೋರಣೆ ಅಚ್ಚರಿ ಹುಟ್ಟಿಸುತ್ತದೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 29, 2023 | 4:36 PM

ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕಾರ್ಡ್ ನೀಡದಿದ್ದರೆ ತಾವಲ್ಲ, ಜನರೇ ಪ್ರತಿಕ್ರಿಯಿಸುತ್ತಾರೆ ಎಂದು ಸುಮಲತಾ ಅಂಬರೀಷ್ ಹೇಳುತ್ತಾರೆ.

ಮಂಡ್ಯ: ರಾಜ್ಯ ವಿಧಾನಸಭಾ ಚುನಾವಣೆಗೆ (assembly polls) ಕೆಲ ದಿನಗಳ ಮೊದಲು ಬಿಜೆಪಿ ತಮ್ಮ ಬೆಂಬಲ ಸೂಚಿಸಿ ಪಕ್ಷದ ಅಭ್ಯರ್ಥಿಗಳ ಪ್ರಚಾರ ಕೂಡ ಮಾಡಿದ ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಅವರ ಕಾಂಗ್ರೆಸ್ ನೆಡೆ ಧೋರಣೆ ಮೃದುವಾಗುತ್ತಿದೆಯೇ? ಮಂಡ್ಯದ ದೊಡ್ಡರಸಿನಕೆರೆಯಲ್ಲಿ (Doddarasinakere) ಅವರು ಮಾತಾಡಿದ್ದನ್ನು ಕೇಳಿಸಿಕೊಂಡರೆ ಹಾಗನ್ನಿಸದಿರದು. ರಾಜ್ಯದ ಬಿಜೆಪಿ ನಾಯಕರೆಲ್ಲ 5 ಗ್ಯಾರಂಟಿಗಳ ಜಾರಿಗೆ ತಡವಾದರೆ, ಉಗ್ರ ಹೋರಾಟ, ಪ್ರತಿಭಟನೆ ನಡೆಸುವುದಾಗಿ ಹೇಳುತ್ತಿದ್ದರೆ, ಸುಮಲತಾ ಮಾತ್ರ ಸರ್ಕಾರ ಸಮಯ ಕೇಳಿದೆ, ಅವರಿಗೆ ಸಮಯ ನೀಡಬೇಕು, ಅವರು ಗ್ಯಾರಂಟಿ ಕಾರ್ಡ್ ನೀಡದಿದ್ದರೆ ತಾವಲ್ಲ, ಜನರೇ ಪ್ರತಿಕ್ರಿಯಿಸುತ್ತಾರೆ ಎಂದು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ