‘ಆ ಒಂದು ವಿಷಯದ ಬಗ್ಗೆ ನನಗೆ ಬೇಸರ ಇದೆ’; ಮಂಜು ಭಾಷಿಣಿ

Updated on: Oct 20, 2025 | 12:14 PM

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರು ಸಾಕಷ್ಟು ಗಮನ ಸೆಳೆಯುತ್ತಿರುವುದು ಗೊತ್ತೇ ಇದೆ. ಇವರನ್ನು ಹತ್ತಿರದಿಂದ ಕಂಡವರು ಮಂಜು ಭಾಷಿಣಿ. ಅವರು ಬಿಗ್ ಬಾಸ್​ನಿಂದ ಹೊರ ಬಂದು ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದರು. ಇದರ ಜೊತೆಗೆ ಒಂದು ವಿಚಾರದ ಬಗ್ಗೆ ಅವರಿಗೆ ಬೇಸರ ಇದೆಯಂತೆ.

ಬಿಗ್ ಬಾಸ್ ಮನೆಯಲ್ಲಿ ಜಂಟಿ ಹಾಗೂ ಒಂಟಿ ಎಂದು ಬೇಪರ್ಡಿಸಲಾಯಿತು. ಎರಡು ವಾರಗಳ ಕಾಲ ಈ ಆಟ ಇತ್ತು. ಆದರೆ, ಈ ಆಟದಿಂದ ಜಂಟಿಗಳಿಗೆ ಸಾಕಷ್ಟು ನಷ್ಟ ಆಗಿದೆಯಂತೆ. ಈ ಬಗ್ಗೆ ಮಂಜು ಭಾಷಿಣಿ ಅವರು ಮಾತನಾಡಿದ್ದಾರೆ. ‘ಜಂಟಿ-ಒಂಟಿ ಆಟದಿಂದ ಜಂಟಿಗಳಿಗೆ ಸಾಕಷ್ಟು ತೊಂದರೆ ಆಯ್ತು. ಆ ಬಗ್ಗೆ ಬೇಸರ ಇದೆ’ ಎಂದು ಮಂಜು ಭಾಷಿಣಿ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More