‘ನಾವೆಲ್ಲ ಸಾಯ್ತೀವಿ’: ತಂದೆ-ತಾಯಿಗೆ ಮೆಸೇಜ್​ ಕಳಿಸಿದ್ದ ‘ಮಾರ್ಟಿನ್​’ ಸಿನಿಮಾ ನಟಿ

‘ನನ್ನ ಇಡೀ ಜೀವನದಲ್ಲಿ ಅಂಥ ಘಟನೆ ನೋಡಿರಲಿಲ್ಲ. 28 ನಿಮಿಷ ನಾವು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕೂತಿದ್ದೆವು. ಆ ಘಟನೆ ಬಗ್ಗೆ ಮತ್ತೆ ಮಾತನಾಡುವುದು ನನಗೆ ಇಷ್ಟ ಇರಲಿಲ್ಲ. ಈಗ ನೀವು ಕೇಳಿದ್ದೀರಿ ಅಂತ ಹೇಳುತ್ತಿದ್ದೇನೆ. ಆ ಅನುಭವನನ್ನು ಹೇಳಲು ಕೂಡ ಸಾಧ್ಯವಿಲ್ಲ. ಆ ಕ್ಷಣದಲ್ಲಿ ನಮಗೆ ಕುಟುಂಬದವರ ನೆನಪು ಆಯಿತು’ ಎಂದು ಎ.ಪಿ. ಅರ್ಜುನ್​ ಅವರು ಹೇಳಿದ್ದಾರೆ.

‘ನಾವೆಲ್ಲ ಸಾಯ್ತೀವಿ’: ತಂದೆ-ತಾಯಿಗೆ ಮೆಸೇಜ್​ ಕಳಿಸಿದ್ದ ‘ಮಾರ್ಟಿನ್​’ ಸಿನಿಮಾ ನಟಿ
|

Updated on: Mar 06, 2024 | 9:01 PM

ಶೂಟಿಂಗ್​ ಮುಗಿಸಿಕೊಂಡು ವಿಮಾನದಲ್ಲಿ ಬರುತ್ತಿದ್ದ ಮಾರ್ಟಿನ್​’ ಸಿನಿಮಾ (Martin Kannada Movie) ತಂಡದವರಿಗೆ ಒಂದು ಕಹಿ ಅನುಭವ ಆಗಿತ್ತು. ಕಾರಣಾಂತರಗಳಿಂದ ವಿಮಾನದ ಹಾರಾಟದಲ್ಲಿ ತೊಂದರೆ ಉಂಟಾಗಿತ್ತು. ಇನ್ನೇನು ಆ ವಿಮಾನ ಅಪಘಾತ ಆಗುತ್ತದೆ ಎಂದು ಇಡೀ ಚಿತ್ರತಂಡದವರು ಭಾವಿಸಿದ್ದರು. ಆ ಕ್ಷಣ ಹೇಗಿತ್ತು ಎಂಬುದನ್ನು ನಿರ್ದೇಶಕ ಎ.ಪಿ. ಅರ್ಜುನ್​ (AP Arjun) ಅವರು ವಿವರಿಸಿದ್ದಾರೆ. ‘ನಮ್ಮೆಲ್ಲರ ಕಣ್ಣಲ್ಲಿ ನೀರು ತುಂಬಿತ್ತು. ನನ್ನ ಪಕ್ಕದಲ್ಲಿ ಸ್ವಾಮಿ ಕುಳಿತಿದ್ದರು. ಅವರ ಪಕ್ಕದಲ್ಲಿ ಹೀರೋಯಿನ್​ ಇದ್ದರು. ಯಾರೂ ಧೈರ್ಯವಾಗಿ ಇರಲಿಲ್ಲ. ಅಷ್ಟುಹೊತ್ತಿಗಾಗಲೇ ಹೀರೋಯಿನ್​ ಅವರು ತಂದೆ-ತಾಯಿಗೆ ಮೆಸೇಜ್​ ಮಾಡಿದ್ದರು. ನಾವೆಲ್ಲ ಸತ್ತು ಹೋಗುತ್ತಿದ್ದೇವೆ, ನಾವೇನಾದರೂ ತಪ್ಪು ಮಾಡಿದ್ದರೆ ಕ್ಷಮಿಸಿ ಅಂತ ಮೆಸೇಜ್​ ಮಾಡಿ ಜೋರಾಗಿ ಅಳುತ್ತಿದ್ದರು. ಆ ದೇವರೇ ನಮ್ಮನ್ನು ಕಾಪಾಡಿದ್ದು. ಎಲ್ಲರಿಗೂ ಪುನರ್​ ಜನ್ಮ’ ಎಂದು ಎ.ಪಿ. ಅರ್ಜುನ್​ ಹೇಳಿದ್ದಾರೆ. ಧ್ರುವ ಸರ್ಜಾ (Dhruva Sarja) ನಟನೆಯ ‘ಮಾರ್ಟಿನ್​’ ಚಿತ್ರದ ಶೂಟಿಂಗ್​ ಮುಗಿದಿದೆ. ಕುಂಬಳಕಾಯಿ ಒಡೆದ ಬಳಿಕ ಚಿತ್ರತಂಡದವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us