ಸಾಲ ಪಡೆದ ಮಹಿಳೆ ತನ್ನ ಗೋಳು ಹೇಳಿಕೊಂಡಾಗ ಕೂಡಲೇ ಸ್ಪಂದಿಸಿದ ಸಚಿವ ಆರ್ ಸುಧಾಕರ್
ಸಾಲ ಪಡೆದ ಮಹಿಳೆ ತಮ್ಮ ಗೋಳು ಹೇಳಿಕೊಳ್ಳಲು ಶನಿವಾರ ಚಿಕ್ಕಬಳ್ಳಾಪುರದಲ್ಲಿ ಸಚಿವ ಆರ್ ಸುಧಾಕರ್ ಅವರು ನಡೆಸುತ್ತಿದ್ದ ಜನತಾ ದರ್ಶನ ಕಾರ್ಯಕ್ರಮಕ್ಕೆ ಆಗಮಿಸಿ ಸಚಿವರೊಂದಿಗೆ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ: ಬಡ್ಡಿಗೆ ಹಣ ಸಾಲ ತೆಗೆದುಕೊಂಡವರ ಸ್ಥಿತಿಯನ್ನು ಸಾಲಗಾರರು ಹೇಗೆ ನರಕವಾಗಿಸುತ್ತಾರೆ ಅನ್ನೋದಿಕ್ಕೆ ಚಿಕ್ಕಬಳ್ಳಾಪುರದ ಈ ಮಹಿಳೆಯೇ ಸಾಕ್ಷಿ. ಇವರು, ಮಮತಾ (Mamata) ಹೆಸರಿನ ಮಹಿಳೆ ಹತ್ತಿರ ಶೇಕಡ 5ರ ಬಡ್ಡಿಯಂತೆ 2 ಲಕ್ಷ ರೂ. ಸಾಲ (hand loan) ತೆಗೆದುಕೊಂಡು ಅದರಲ್ಲಿ ರೂ.1 ಲಕ್ಷ ಹಿಂತಿರುಗಿಸಿದ್ದಾರೆ ಮತ್ತು ಇನ್ನೊಂದು ಲಕ್ಷ ಕೊಡುವುದು ಬಾಕಿಯಿದೆ. ಆದರೆ, ಮಮತಾ ಇನ್ನೂ ರೂ. 4.80 ಲಕ್ಷ ಕೊಡಬೇಕು ಅಂತ ಕಾಡಿಸಿ, ಪೀಡಿಸಿ, ಕಿರುಕುಳ ನೀಡಿ ಪೊಲೀಸ್ ಠಾಣೆಯಲ್ಲೂ ದೂರು ಸಲ್ಲಿಸಿದ್ದಾರಂತೆ. ಸಾಲ ಪಡೆದ ಮಹಿಳೆ ತಮ್ಮ ಗೋಳು ಹೇಳಿಕೊಳ್ಳಲು ಶನಿವಾರ ಚಿಕ್ಕಬಳ್ಳಾಪುರದಲ್ಲಿ ಸಚಿವ ಆರ್ ಸುಧಾಕರ್ (Dr R Sudhakar) ಅವರು ನಡೆಸುತ್ತಿದ್ದ ಜನತಾ ದರ್ಶನ ಕಾರ್ಯಕ್ರಮಕ್ಕೆ ಆಗಮಿಸಿ ಸಚಿವರೊಂದಿಗೆ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಸಚಿವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ ಎಲ್ ನಾಗೇಶ್ (DL Nagesh) ಅವರಿಗೆ ಕೂಡಲೇ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ.
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್ನಲ್ಲೊಂದು ಭಾವೈಕ್ಯತೆಯ ಜಾತ್ರೆ

