Sign In

By signing in or creating an account, you agree with Associated Broadcasting Company's Terms & Conditions and Privacy Policy.

MB Patil: ತಮಗೆ ಸಿಕ್ಕ ಖಾತೆ ಕುರಿತು ಅಸಮಾಧಾನ ತೋಡಿಕೊಳ್ಳಲು ಎಂಬಿ ಪಾಟೀಲ್ ಮುಖ್ಯಮಂತ್ರಿಗಳ ನಿವಾಸಕ್ಕೆ ಆಗಮಿಸಿದರೇ?

MB Patil: ತಮಗೆ ಸಿಕ್ಕ ಖಾತೆ ಕುರಿತು ಅಸಮಾಧಾನ ತೋಡಿಕೊಳ್ಳಲು ಎಂಬಿ ಪಾಟೀಲ್ ಮುಖ್ಯಮಂತ್ರಿಗಳ ನಿವಾಸಕ್ಕೆ ಆಗಮಿಸಿದರೇ?

ಅರುಣ್​ ಕುಮಾರ್​ ಬೆಳ್ಳಿ
|

Updated on: May 29, 2023 | 1:16 PM

ಪಾಟೀಲ್ ಇಂದು ಮುಂಜಾನೆ ಸಮಯದಲ್ಲೇ ಮುಖ್ಯಮಂತ್ರಿಗಳ ನಿವಾಸಕ್ಕೆ ಆಗಮಿಸಿದರು.

ಬೆಂಗಳೂರು: ಮೊದಲ ಮತ್ತು ಎರಡನೇ ಹಂತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಎಲ್ಲ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಖಾತೆಗಳನ್ನು ಹಂಚಿದ್ದಾರೆ. ಆದರೆ ಕೆಲ ಸಚಿವರಿಗೆ ಅದರಲ್ಲೂ ವಿಶೇಷವಾಗಿ ಹಿರಿಯರಿಗೆ (seniors) ತಮಗೆ ಸಿಕ್ಕ ಖಾತೆಯಿಂದ ಸಮಾಧಾನವಿಲ್ಲ. ಅಸಮಾಧಾನಗೊಂಡಿರುವವರು ಮಿನಿಸ್ಟ್ರಾಗುವ ಆಸೆಯಿಟ್ಟುಕೊಂಡು ನಿರಾಶೆಗೊಂಡ ಶಾಸಕರನ್ನು ನೋಡಿ ಸಮಾಧಾನಪಟ್ಟುಕೊಂಡರೆ ಸರ್ಕಾರ ಸುಗಮವಾಗಿ ನಡೆಯುತ್ತದೆ. ಜಲಸಂಪನ್ಮೂಲ ಖಾತೆ ಮೇಲೆ ಕಣ್ಣಿಟ್ಟಿದ್ದ ಎಂಬಿ ಪಾಟೀಲ್ (MB Patil) ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಜೊತೆ ಐಟಿ-ಬಿಟಿ ಖಾತೆ ಸಿಕ್ಕಿವೆ. ಪಾಟೀಲ್ ಇಂದು ಮುಂಜಾನೆ ಸಮಯದಲ್ಲೇ ಮುಖ್ಯಮಂತ್ರಿಗಳ ನಿವಾಸಕ್ಕೆ ಆಗಮಿಸಿದರು. ಅಸಮಾಧಾನವನ್ನು ತೋಡಿಕೊಳ್ಳಲು ಅವರು ಆಗಮಿಸಿರಬಹುದೆಂದು ವದಂತಿ ಹಬ್ಬಿದೆ.

ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ