RB Thimmapur: ಅಧಿಕಾರದ ಅಮಲು… ಮನವಿ ಕೊಡಲು ಬಂದ ರೈತನಿಗೆ ಏಯ್​​ ನಡಿ ಎಂದು ಗದರಿದ ಸಚಿವ ಆರ್​.ಬಿ. ತಿಮ್ಮಾಪುರ

Edited By: ಸಾಧು ಶ್ರೀನಾಥ್​

Updated on: Aug 21, 2023 | 5:25 PM

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರುವ KBJNL ಎಂಡಿ‌ ಕಚೇರಿಯಲ್ಲಿ ಇಂದು ಸೋಮವಾರ ಸಭೆ ನಡೆದಿತ್ತು. ಸಭೆ‌ ಬಳಿಕ‌ ಐಸಿಸಿ ಅಧ್ಯಕ್ಷ ತಿಮ್ಮಾಪುರ‌ ಭೇಟಿಗೆ ರೈತರು ಮುಂದಾದರು. ಆ ವೇಳೆ ‘ಏಯ್​ ನಡಿ’ ಎಂದು ರೈತರನ್ನು ಸಚಿವ ಆರ್.ಬಿ. ತಿಮ್ಮಾಪುರ ಗದರಿದರು. ಒಂದು ನಿಮಿಷ ಮಾತನಾಡಬೇಕೆಂದು ಸಚಿವರ ಬಳಿ ರೈತರು ಪರಿಪರಿಯಾಗಿ ಬೇಡಿದರು. ಸರ್ ಒಂದು ನಿಮಿಷ ಮಾತನಾಡಬೇಕು ಎಂದರು ರೈತರು (Farmer). ಆದರೆ ಅದು ಯಾವುದಕ್ಕೂ ಸೊಪ್ಪು ಹಾಕದ ಸಚಿವ ತಿಮ್ಮಾಪುರ ಏಯ್​​ ನಡಿ ಎಂದು ಗದರಿಯೇಬಿಟ್ಟರು.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರುವ (Alamatti) KBJNL ಎಂಡಿ‌ ಕಚೇರಿಯಲ್ಲಿ ಇಂದು ಸೋಮವಾರ ಸಭೆ ನಡೆದಿತ್ತು. ಸಭೆ‌ ಬಳಿಕ‌ ಐಸಿಸಿ ಅಧ್ಯಕ್ಷ ತಿಮ್ಮಾಪುರ‌ (RB Thimmapur) ಭೇಟಿಗೆ ರೈತರು ಮುಂದಾದರು. ಆ ವೇಳೆ ‘ಏಯ್​ ನಡಿ’ ಎಂದು ರೈತರನ್ನು ಸಚಿವ ಆರ್.ಬಿ. ತಿಮ್ಮಾಪುರ ಗದರಿದರು. ಒಂದು ನಿಮಿಷ ಮಾತನಾಡಬೇಕೆಂದು ಸಚಿವರ ಬಳಿ ರೈತರು ಪರಿಪರಿಯಾಗಿ ಬೇಡಿದರು. ಸರ್ ಒಂದು ನಿಮಿಷ ಮಾತನಾಡಬೇಕು ಎಂದರು ರೈತರು (Farmer). ಆದರೆ ಅದು ಯಾವುದಕ್ಕೂ ಸೊಪ್ಪು ಹಾಕದ ಸಚಿವ ತಿಮ್ಮಾಪುರ ಏಯ್​​ ನಡಿ ಎಂದು ಗದರಿಯೇಬಿಟ್ಟರು. ಅದಕ್ಕೆ ನಾನು ಸಿಎಂ ಬಳಿ ಹೋಗುವೆ. ನಾನು ರಾಜ್ಯಾಧ್ಯಕ್ಷ ಇದ್ದೇನೆ ಸರ್ ಎಂದು ರೈತ ಮುಖಂಡ ವಾಸುದೇವ ಮೇಟಿ ಜೋರಾಗಿ ಹೇಳಿದ್ದಕ್ಕೆ ಮುಂದಿನ ಸಭೆಯಲ್ಲಿ ನಿಮ್ಮ ಸಲಹೆ ಪರಿಗಣಿಸೋಣ ಎಂದು ತಿಮ್ಮಾಪುರ ಹೇಳಿದರು. ಒಟ್ಟಾರೆ ಸಚಿವ ಆರ್​.ಬಿ.ತಿಮ್ಮಾಪುರ ವರ್ತನೆಗೆ ರೈತರು ಬೇಸರ‌ ವ್ಯಕ್ತಪಡಿಸಿದರು.

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಮುಧೋಳ ಕ್ಷೇತ್ರದಲ್ಲಿ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಸೋಲಿಸಿ ಆರ್ ಬಿ ತಿಮ್ಮಾಪೂರ ಗೆಲುವು ಸಾಧಿಸಿದ್ದಾರೆ. 3ನೇ ಬಾರಿಗೆ ಸಚಿವರಾಗಿ ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ ಮತ್ತು ಮುಜರಾಯಿ ಸಚಿವ ಖಾತೆ ನಿಭಾಯಿಸುತ್ತಿದ್ದಾರೆ. ಜೊತೆಗೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರೂ ಹೌದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More