ಬಸನಗೌಡ ಯತ್ನಾಳ್ ಸವಾಲು ಸ್ವೀಕರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಶಿವಾನಂದ ಪಾಟೀಲ್
ಯತ್ನಾಳ್ ಬಳಸಿದ ಭಾಷೆಯನ್ನು ಅನುಕರಿಸುವ ಗೋಜಿಗೆ ಶಿವಾನಂದ ಪಾಟೀಲ್ ಹೋಗಿಲ್ಲ. ಅವರು ಸುಸಂಸ್ಕೃತ ಭಾಷೆಯಲ್ಲ್ಲಿ ಪಂಥಾಹ್ವಾನ ಸ್ವೀಕರಿಸಿದ್ದನ್ನು ಹೇಳುತ್ತಾರೆ, ಏಕವಚನದಲ್ಲೂ ಮಾತಾಡಿಲ್ಲ. ರಾಜೀನಾಮೆ ಸಲ್ಲಿಸಿರುವ ವಿಚಾರ ತೀರ ವೈಯಕ್ತಿಕವಾದದ್ದು, ಮುಖ್ಯಮಂತ್ರಿಯವರಿಗಾಗಲೀ ಅಥವಾ ಪಕ್ಷದ ವರಿಷ್ಠರಿಗಾಗಲೀ ವಿಷಯ ಹೇಳಿಲ್ಲ ಎಂದು ಅವರು ಹೇಳಿದರು. ರಾಜ್ಯ ರಾಜಕಾರಣದಲ್ಲಿ ಇದು ಅನಿರೀಕ್ಷಿತ ಬೆಳವಣಿಗೆ.
ಬೆಂಗಳೂರು, ಮೇ 2: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ನೀಡಿದ ಸವಾಲನ್ನು ಸ್ವೀಕರಿಸಿರುವ ಸಚಿವ ಮತ್ತು ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ಶಾಸಕ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸಿ ತಾನೂ ಬಾಗೇವಾಡಿ ಮತ್ತು ವಿಜಯಪುರ ಎರಡೂ ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸಲು ತಯಾರಿದ್ದೇನೆ ಎಂದರು. ತನ್ನ ವಿರುದ್ಧ ವಿಜಯಪುರದಲ್ಲಿ ಪ್ರತಿಭಟನೆ ನಡೆದ ಬಳಿಕ ಉಚ್ಚಾಟಿತ ಬಿಜೆಪಿ ಶಾಸಕ ಯತ್ನಾಳ್ ಅವರು ಶಿವಾನಂದ ಪಾಟೀಲ್ ಮತ್ತು ಹುನುಗುಂದ ಶಾಸಕ ವಿಜಯಾನಂದ್ ಕಾಶಪ್ಪನವರ್ ಅವರಿಗೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿ ತನ್ನ ವಿರುದ್ಧ ಸ್ಪರ್ಧಿಸುವಂತೆ ಸವಾಲು ಎಸೆದಿದ್ದರು. ಯತ್ನಾಳ್ ಆಡಿದ ಮಾತುಗಳ ಆಡಿಯೋ ರಿಕಾರ್ಡಿಂಗ್ ಅನ್ನು ಶಿವಾನಂದ ಪಾಟೀಲ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದರು. ಯತ್ನಾಳ್ ಬಳಸಿರುವ ಭಾಷೆ ವರದಿ ಮಾಡಲು ಸಾಧ್ಯವಿಲ್ಲ.
ಇದನ್ನೂ ಓದಿ: Shivanand Patil Resign: ಶಾಸಕ ಸ್ಥಾನಕ್ಕೆ ಶಿವಾನಂದ ಪಾಟೀಲ್ ರಾಜೀನಾಮೆ, ಯತ್ನಾಳ್ ಸವಾಲು ಸ್ವೀಕರಿಸಿದ ಸಚಿವ
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ