ರೇಣುಕಾ ಸ್ವಾಮಿ ಕೊಲೆಯಾದ ದಿನ ಅದೇ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?

| Updated By: ಮದನ್​ ಕುಮಾರ್​

Updated on: Jul 05, 2024 | 9:42 PM

ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಕೇಸ್​ಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಗಳು ಪೊಲೀಸರಿಗೆ ಲಭ್ಯವಾಗಿವೆ. ಹಲವು ದಿನಗಳಿಂದ ಪೊಲೀಸರು ಹುಡುಕಾಟ ನಡೆಸುತ್ತಿದ್ದ ಒಂದು ವಿಚಾರಕ್ಕೆ ಉತ್ತರ ಕೂಡ ಸಿಕ್ಕಿದೆ. ರೇಣುಕಾ ಸ್ವಾಮಿಯ ಕೊಲೆ ನಡೆದ ದಿನವೇ ಶಾಸಕರೊಬ್ಬರಿಗೆ ಆಪ್ತನಾದ ವ್ಯಕ್ತಿ ಕೂಡ ಪಟ್ಟಣಗೆರೆ ಶೆಡ್​ಗೆ ಬಂದಿದ್ದ ಎಂಬುದು ಖುಚಿತವಾಗಿದೆ. ಆತನ ಬಗ್ಗೆ ಇಲ್ಲಿದೆ ಮಾಹಿತಿ..

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿವರಗಳು ನಿಜಕ್ಕೂ ಶಾಕಿಂಗ್​ ಆಗಿವೆ. ನಟ ದರ್ಶನ್​ ಅವರು ಈ ಕೇಸ್​ನಲ್ಲಿ ಎ2 ಆಗಿದ್ದಾರೆ. ಪವಿತ್ರಾ ಗೌಡ ಎ1 ಆಗಿದ್ದು, ಈಗಾಗಲೇ 19 ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ತನಿಖೆ ಮುಂದುವರಿದಂತೆಲ್ಲ ಇನ್ನೂ ಅನೇಕರ ಹೆಸರುಗಳು ಹೊರಬರುತ್ತಿವೆ. ಬೆಂಗಳೂರಿನ ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾ ಸ್ವಾಮಿ ಹತ್ಯೆ ನಡೆದಿತ್ತು. ಆ ಘಟನೆ ನಡೆದ ಬಳಿಕ ಅಲ್ಲಿಗೆ ಹಲವರು ಭೇಟಿ ನೀಡಿದ್ದರು. ಅವರ ಪೈಕಿ ಕಾರ್ತಿಕ್​ ಪುರೋಹಿತ್ ಕೂಡ ಇದ್ದಾನೆ. ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರ ಕಚೇರಿಯಲ್ಲಿ ಕೆಲಸ ಮಾಡುವ ಈತ ಶೆಡ್​ಗೆ ಬಂದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈತನ ಕಾರಿನಲ್ಲೇ ಪ್ರದೋಶ್​ ಎಂಬಾತ ಹಣ ತಂದು ಈ ಕೇಸ್​ ಮುಚ್ಚಿಹಾಕುವ ಪ್ರಯತ್ನ ಮಾಡಿದ್ದ ಎಂಬ ಮಾಹಿತಿ ಇದೆ. ಕಾರ್ತಿಕ್​ ಪುರೋಹಿತ್​ಗೆ ಪೊಲೀಸರು ನೋಟಿಸ್​ ನೀಡಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್​ಗೆ ಸಂಬಂಧಪಟ್ಟಂತೆ ಕಾರ್ತಿಕ್​ ಪುರೋಹಿತ್ ನೀಡುವ ಹೇಳಿಕೆನಿಂದ ಇನ್ನಷ್ಟು ಸಾಕ್ಷಿಗಳು ಸಿಗಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on