ಕೆಪಿಎಸ್ಸಿ ಹಗರಣ: ಕೊನೆಗೂ ಸಿಐಡಿ ಮುಂದೆ ವಿಚಾರಣೆಗೆ ಹಾಜರಾದ ನಾಪತ್ತೆಯಾಗಿದ್ದ ಶಾಂತಾ ಹೊಸಮನಿ
ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದ ಪ್ರಮುಖ ಆರೋಪಿ, ಕೆಪಿಎಸ್ಸಿ ಸದಸ್ಯೆ ಶಾಂತಾ ಹೊಸಮನಿ ನಿರೀಕ್ಷಣಾ ಜಾಮೀನು ವಜಾಗೊಂಡ ಬೆನ್ನಲ್ಲೇ ಕೊನೆಗೂ ಬೆಂಗಳೂರಿನ ಸಿಐಡಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ನೇಮಕಾತಿ ಸಂಬಂಧ ಮಮಿತಾ ಎಂಬ ಅಭ್ಯರ್ಥಿಯ ಜೊತೆ ಮೂರು ಬಾರಿ ಫೋನ್ ಮೂಲಕ KPSC ಸದಸ್ಯೆ ಶಾಂತಾ ಹೊಸಮನಿ ಮಾತುಕತೆ ನಡೆಸಿದ್ದರು. ಸಂದರ್ಶನಕ್ಕೂ ಮೊದಲೇ ಅಭ್ಯರ್ಥಿಯ ಜೊತೆ ಸಂಭಾಷಣೆ ನಡೆಸುವ ಆರೋಪ ಅವರ ಮೇಲಿದೆ.
- Kiran HV
- Updated on: Sep 17, 2026
- 11:49 am
ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಸಂಕಷ್ಟ ಹೆಚ್ಚಾಗುವ ಸಾಧ್ಯತೆ: ಪಿಎಂಎಲ್ಎ ಅಡಿ ಕೇಸ್ ದಾಖಲಿಸಲು ಸಿದ್ಧತೆ
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಇಡಿ ತನಿಖೆ ಮತ್ತಷ್ಟು ಬಿಗಿಯಾಗುವ ಸಾಧ್ಯತೆ ಇದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ಮುಂದಿನ ಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ ಎಂಬುದು ಮೂಲಗಳಿಂದ ತಿಳಿದುಬಂದಿದ್ದು, ಹವಾಲಾ ಹಣದ ವಹಿವಾಟಿನ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ ಎಂದು ವರದಿಯಾಗಿದೆ.
- Kiran HV
- Updated on: Sep 16, 2026
- 9:51 am
ಸತೀಶ್ ಜಾರಕಿಹೊಳಿ ಕೇಸ್: ಅಧಿಕಾರಿಗಳಿಗೆ ಇಡಿ ನಿರ್ದೇಶಕ ಖಡಕ್ ಸೂಚನೆ
ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ನಡೆದ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆದಿದೆ. 3 ಕೋಟಿ ರೂಪಾಯಿಗೂ ಹೆಚ್ಚು ನಗದು, ವಿದೇಶಿ ಕರೆನ್ಸಿ, ವಿದೇಶಿ ಹೂಡಿಕೆ ಹಾಗೂ ಲೋಕೋಪಯೋಗಿ ಟೆಂಡರ್ಗಳಲ್ಲಿನ ಕಿಕ್ಬ್ಯಾಕ್ ಆರೋಪಗಳ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಈ ಕುರಿತು ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ.ಇನ್ನು ಈ ಪ್ರಕರಣದ ದಾಖಲೆಗಳನ್ನು ಎಲ್ಲೂ ಸೋರಿಕೆ ಮಾಡದಂತೆ ಇಡಿ ನಿರ್ದೇಶಕ ರಾಹುಲ್ ನವೀನ್ ಖ ತಮ್ಮ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲಿ ಈವರೆಗೆ ಎಷ್ಟು ಗುತ್ತಿಗೆ ಕೊಟ್ಟಿದ್ದಾರೆ? ಗುತ್ತಿಗೆ ಪಡೆದವರು ಹಾಗೂ ಸತೀಶ್ ಜಾರಕಿಹೊಳಿಗೆ ಏನು ಸಂಬಂಧ? ಯಾರ್ಯಾರಿಗೆ ಗುತ್ತಿಗೆ ಕೊಟ್ಟಿದ್ದಾರೆ ಎಂಬ ಮಾಹಿತಿ ಕಲೆ ಹಾಕಿ. ಹಾಗೇ ರಾಜಕೀಯ ಬೆಳವಣಿಗೆ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಷ್ಪಕ್ಷಪಾತವಾಗಿ ಸಿಕ್ಕಿರುವ ಮಾಹಿತಿ ಆಧರಿಸಿ ಮುಂದಿನ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
- Kiran HV
- Updated on: Sep 15, 2026
- 4:23 pm
ಕೆಪಿಎಸ್ಸಿಯಲ್ಲಿ ಮತ್ತೊಂದು ಭಾರೀ ಅಕ್ರಮ: ಗ್ರಾಮೀಣ ಕುಡಿಯುವ ನೀರು ಇಲಾಖೆ ನೇಮಕಾತಿಯಲ್ಲೂ ಅಕ್ರಮ, ಒಎಂಆರ್ ಶೀಟ್ ತಿದ್ದುಪಡಿ!
ಕೆಪಿಎಸ್ಸಿ ನೇಮಕಾತಿಯಲ್ಲಿ ಮತ್ತೊಂದು ಬೃಹತ್ ಅಕ್ರಮ ಬಯಲಾಗಿದೆ. 2023ರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಹುದ್ದೆಗಳ ನೇಮಕಾತಿಯಲ್ಲಿ OMR ಶೀಟ್ಗಳನ್ನು ತಿದ್ದುಪಡಿ ಮಾಡಲಾಗಿದ್ದು, ಎಫ್ಎಸ್ಎಲ್ ವರದಿಯೂ ಇದನ್ನು ದೃಢಪಡಿಸಿದೆ. ಒಂದು ಹುದ್ದೆಗೆ ₹2 ರಿಂದ ₹5 ಕೋಟಿ ಡೀಲ್ ನಡೆದಿರುವ ಶಂಕೆ ವ್ಯಕ್ತವಾಗಿದೆ.
- Kiran HV
- Updated on: Sep 11, 2026
- 10:47 am
ಮನೆಯಲ್ಲಿ ಕೋಟ್ಯಂತರ ರೂ ನಗದು ಪತ್ತೆ: ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ
ವಿದೇಶದಲ್ಲಿ ಅಕ್ರಮ ಹೂಡಿಕೆ ಸಂಬಂಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪದಡಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ನಡೆಸಿದೆ. ಸತೀಶ್ ಜಾರಕಿಹೊಳಿ ಬೆಳಗಾವಿ ಹಾಗೂ ಬೆಂಗಳೂರು ಮನೆ, ಕಚೇರಿ, ಆಪ್ತರ ಮನೆ ಅಂತಾ 18 ಕಡೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಹಲವು ಮಹತ್ವದ ದಾಖಲೆಗಳ ಜೊತೆಗೆ ಬರೋಬ್ಬರಿ ಸತೀಶ್ ಪುತ್ರಿ ಚಿಕ್ಕೋಡಿ ಕ್ಷೇತ್ರದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ನಿವಾಸದಲ್ಲಿ 1.2 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಇದರೊಂದಿಗೆ ದಾಳಿಯಲ್ಲಿ ಒಟ್ಟು ಒಟ್ಟು 3 ಕೋಟಿ ರೂ. ಹಣ ಪತ್ತೆಯಾಗಿದ್ದು, ಇದು ಸತೀಶ್ ಜಾರಕಿಹೊಳಿಗೆ ಸಂಕಷ್ಟ ತಂದಿಟ್ಟಿದೆ.
- Kiran HV
- Updated on: Sep 10, 2026
- 3:47 pm
ವಾಲ್ಮೀಕಿ ಅಭಿವೃದ್ಧಿ ನಿಗಮದದ ಹಗರಣ: ಇಡಿ ವಿಚಾರಣೆಗೆ ಹಾಜರಾದ ಮಾಜಿ ಸಚಿವ ಬಿ. ನಾಗೇಂದ್ರ
ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರು ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆಗೆ ಹಾಜರಾಗಿದ್ದಾರೆ. ಮನಿ ಲಾಂಡರಿಂಗ್ ಆರೋಪದಡಿ ಇಡಿ ಸಮನ್ಸ್ ನೀಡಿತ್ತು. ಈಗಾಗಲೇ ಚಾರ್ಜ್ಶೀಟ್ ಸಲ್ಲಿಸಿದ್ದರೂ, ಹೆಚ್ಚಿನ ಮಾಹಿತಿ ಮತ್ತು ದಾಖಲೆಗಳನ್ನು ಸಂಗ್ರಹಿಸಲು ಈ ವಿಚಾರಣೆ ನಡೆಸಲಾಗುತ್ತಿದೆ.
- Kiran HV
- Updated on: Sep 7, 2026
- 3:32 pm
ಕೆಪಿಎಸ್ಸಿ ಅಭ್ಯರ್ಥಿಗಳಿಗೆ ಡೀಲ್ ಮಾಡಿದ ಪ್ಲ್ಯಾನ್ ನೋಡಿದ್ರೆ ದಂಗಾಗೋದು ಗ್ಯಾರೆಂಟಿ !
ಕೆಪಿಎಸ್ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿ ಸಿಐಡಿ ಅಧಿಕಾರಿಗಳಿಗೆ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಜ್ಞಾನೇಂದ್ರ ಕುಮಾರ್ ಮತ್ತು ಬಸವರಾಜು ಅಭ್ಯರ್ಥಿಗಳಿಗೆ ನೇರವಾಗಿ ಕರೆ ಮಾಡಿ, 60-80 ಲಕ್ಷ ರೂ.ಗೆ ಹುದ್ದೆ ಮಾರಾಟದ ಡೀಲ್ ನಡೆಸಿದ್ದಾರೆ. ಹಣವನ್ನು ನಗದು ಮತ್ತು ಬ್ಯಾಂಕ್ ವರ್ಗಾವಣೆ ಮೂಲಕ ಸ್ವೀಕರಿಸಿ, ಸರ್ಕಾರಿ ಹುದ್ದೆಗಳನ್ನು ಹರಾಜು ಹಾಕಿದ ಭಯಾನಕ ಯೋಜನೆ ಸಿಐಡಿ ತನಿಖೆಯಲ್ಲಿ ಬಯಲಾಗಿದೆ.
- Kiran HV
- Updated on: Sep 7, 2026
- 12:22 pm
ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಸಿಐಡಿ ವಿಚಾರಣೆ ವೇಳೆ ಕನ್ನಾಳೆ ಕಳ್ಳಾಟಗಳು ಬಯಲು
ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆ ತೀವ್ರಗೊಂಡಿದ್ದು, ಆರೋಪಿ ಬಸವರಾಜ್ ಕನ್ನಾಳೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೊತೆಗೂಡಿ ಕೋಟ್ಯಾಂತರ ರೂಪಾಯಿ ಡೀಲ್ ನಡೆಸಿರುವುದು ಸಿಐಡಿ ವಿಚಾರಣೆಯಲ್ಲಿ ಬಯಲಾಗಿದೆ. ಕನ್ನಾಳೆ ಸ್ನೇಹಿತರು, ಆಪ್ತರ ಅಕೌಂಟ್ ಮೂಲಕವೂ ವ್ಯವಹಾರ ನಡೆದಿರುವ ಕಾರಣ ಅವರ ವಿಚಾರಣೆಗೂ ಸಿಐಡಿ ಸಿದ್ಧತೆ ನಡೆಸಿದೆ.
- Kiran HV
- Updated on: Sep 7, 2026
- 11:54 am
ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ ಅಕ್ರಮ ನೇಮಕಾತಿ: ಟಾಪರ್ಸ್ ಲಿಸ್ಟ್ ನೋಡಿ ಪೊಲೀಸರೇ ಶಾಕ್!
ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದ ಭಾರೀ ಹಗರಣವನ್ನು ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದು, ಟಾಪರ್ಸ್ ಪಟ್ಟಿಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಓಎಂಆರ್ ತಿದ್ದುಪಡಿ, ನಕಲಿ ಪ್ರಮಾಣಪತ್ರಗಳು ಹಾಗೂ ಲಕ್ಷಾಂತರ ರೂಪಾಯಿಗಳ ವಿನಿಮಯದ ಮೂಲಕ ಅನರ್ಹರಿಗೆ ಹುದ್ದೆಗಳನ್ನು ನೀಡಲಾಗಿದೆ. ಬಸವರಾಜ್ ಕನ್ನಾಳೆಯ ಡೈರಿಯಲ್ಲಿ ಕೆಪಿಎಸ್ಸಿ ಹಗರಣದ ಹಲವು ಮಹತ್ವದ ಮಾಹಿತಿ ದೊರೆತಿದೆ.
- Kiran HV
- Updated on: Sep 5, 2026
- 12:57 pm
ಕೆಪಿಎಸ್ಸಿ ಹಗರಣದ ಕಿಂಗ್ಪಿನ್ IAS ಅಧಿಕಾರಿ ಎಸ್ಕೇಪ್ ಆಗಿದ್ದು ಹೇಗೆ?: ದೆಹಲಿ, ನೋಯ್ಡಾ, ಕೊಲಂಬೊ ಟ್ರಿಪ್ನ ಸ್ಫೋಟಕ ಸತ್ಯ
ಕೆಪಿಎಸ್ಸಿ ಹಗರಣದ ಕಿಂಗ್ಪಿನ್, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿ 11 ದಿನಗಳ ನಂತರ ಪತ್ತೆಯಾದ ರೋಚಕ ಕಥೆ. ಇಡಿ ದಾಳಿ ನಿರೀಕ್ಷೆಯಲ್ಲಿದ್ದ ಜ್ಞಾನೇಂದ್ರ, ದೆಹಲಿ, ನೋಯ್ಡಾ, ಕೊಲಂಬೋ, ಚೆನ್ನೈಗೆ ಪ್ರಯಾಣಿಸಿ, ಪ್ರಭಾವಿಗಳ ಸೂಚನೆ ಮೇರೆಗೆ ಬೆಂಗಳೂರಿಗೆ ಮರಳಿದರು. ಸಿಐಡಿ ವಿಚಾರಣೆ ನಂತರ ಬಂಧನಕ್ಕೊಳಗಾಗಿ, ತನಿಖೆಗೆ ಒಳಪಟ್ಟಿದ್ದು, ಹಲವು ಪ್ರಭಾವಿಗಳ ಪಾತ್ರ ಬಯಲಾಗಿದೆ.
- Kiran HV
- Updated on: Sep 3, 2026
- 2:38 pm
ರೂಮಲ್ಲಿ ಗಲಾಟೆ, ಕಪಾಳಕ್ಕೆ ಹೊಡೆದಿದ್ದ ಗರ್ಲ್ಫ್ರೆಂಡ್! ಜ್ಞಾನೇಂದ್ರ ಕುಮಾರ್ ಪರಾರಿ ಹಿಂದಿನ ರೋಚಕ ಸಂಗತಿ ಬಯಲು
ಕೆಪಿಎಸ್ಸಿ ಪಶುವೈದ್ಯರ ನೇಮಕಾತಿ ಹಗರಣ: ಕೆಪಿಎಸ್ಸಿ ಪಶುವೈದ್ಯರ ನೇಮಕಾತಿ ಹಗರಣ ಪ್ರಕರಣದಲ್ಲಿ ಬಂಧಿತ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ಎಸ್ಕೇಪ್ ಕುರಿತ ಹಲವು ಅಂಶಗಳು ಸಿಐಡಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿವೆ. ದೆಹಲಿ, ಶ್ರೀಲಂಕಾ, ಚೆನ್ನೈ ಮೂಲಕ ನಡೆದ ಓಡಾಟದ ಬಗ್ಗೆಯೂ ತನಿಖೆ ನಡೆಯುತ್ತಿದೆ.
- Kiran HV
- Updated on: Sep 3, 2026
- 8:49 pm
ಕೆಪಿಎಸ್ಸಿ ಹಗರಣ: ಬೆಳಗ್ಗೆ ಡೀಲು, ರಾತ್ರಿ ಪುಲ್ ಪಾರ್ಟಿ, ಐಎಎಸ್ ಅಧಿಕಾರಿಯ ರಾತ್ರಿ ಕಾರುಬಾರು ಬಯಲು
ಕೆಪಿಎಸ್ಸಿ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ಫೋಟಕ ಮಾಹಿತಿ ‘ಟಿವಿ9’ಗೆ ಲಭ್ಯವಾಗಿದೆ. ಅರೆಸ್ಟ್ ಆಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕೈಯಿಂದ ಪ್ರಶ್ನೆ ಬರೆದು ಲೀಕ್ ಮಾಡಿ, OMR ಶೀಟ್ ತಿದ್ದುತ್ತಿದ್ದ ಸ್ಫೋಟಕ ಮಾಹಿತಿ ಬಯಲಾಗಿದೆ. ಅಲ್ಲದೇ ಈ ಜ್ಞಾನೇಂದ್ರ ಕುಮಾರ್, ಹಗಲಲಲ್ಲಿ ಡೀಲ್ ಮಾಡಿಕೊಂಡು ರಾತ್ರಿಯಾದರೆ ಸಾಕು ಮೋಜು ಮಸ್ತಿಯಲ್ಲಿ ತೇಲಾಡುತ್ತಿದ್ದ. ಇದಕ್ಕೆ ಪೂರಕವೆಂಬಂತೆ ಆಯ್ಕೆಯಾಗಿದ್ದ ಅಭ್ಯರ್ಥಿಯ ಬರ್ತಡೇ ಪಾರ್ಟಿಯಲ್ಲಿ ಫುಲ್ ಡ್ಯಾನ್ಸ್ ಮಾಡಿದ್ದ ವಿಡಿಯೋ ಟಿವಿ9ಗೆ ಲಭ್ಯವಾಗಿದೆ.
- Kiran HV
- Updated on: Sep 2, 2026
- 2:55 pm