AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುದಾನ ನೀಡಬೇಕೆಂದು ಸಿದ್ದರಾಮಯ್ಯ ಮುಂದೆಯೇ ಬೀಗ ಬೈರತಿ ಸುರೇಶ್ ಕಾಲೆಳೆದ ವಿಶ್ವನಾಥ್!

ಅನುದಾನ ನೀಡಬೇಕೆಂದು ಸಿದ್ದರಾಮಯ್ಯ ಮುಂದೆಯೇ ಬೀಗ ಬೈರತಿ ಸುರೇಶ್ ಕಾಲೆಳೆದ ವಿಶ್ವನಾಥ್!

ಅರುಣ್​ ಕುಮಾರ್​ ಬೆಳ್ಳಿ
|

Updated on: May 03, 2025 | 3:46 PM

ತಮ್ಮ ಭಾಷಣದಲ್ಲಿ ವಿಶ್ವನಾಥ್ ಅವರು ಮುಖ್ಯಮಂತ್ರಿಯವರನ್ನು ಹಾಡಿ ಹೊಗಳಿದರು. ಕೆಂಪೇಗೌಡನ ಊರು ಯಲಹಂಕದ ಇನ್ನಷ್ಟು ಅಭಿವೃದ್ಧಿಗೆ ಅನುದಾನ ಬೇಕಿದೆಯೆಂದು ಸಿಎಂ ಗಮನಕ್ಕೆ ತಂದಿದ್ದೇನೆ, ಬಜೆಟ್ ನಂತರ ಕೊಡುತ್ತೇನೆ ಅಂದವರು ಇನ್ನೂ ಕೊಟ್ಟಿಲ್ಲ, ಅದರೆ ಅಭಿವೃದ್ಧಿ ವಿಷಯದಲ್ಲಿ ಅವರು ತಾರತಮ್ಯ ಮಾಡಲ್ಲ ಎಂದ ಅವರು ಜಾಸ್ತಿ ಅನುದಾನ ಪಡೆದಿರುವ ಕೃಷ್ಣ ಭೈರೇಗೌಡರಿಂದ ಸಾಲ ಕೇಳಿದಾಗ ಜನ ಮತ್ತೊಮ್ಮೆ ನಕ್ಕರು.

ಬೆಂಗಳೂರು, ಮೇ 3: ಯಲಹಂಕ ಬಿಜೆಪಿ ಶಾಸಕ ಎಸ್ ಅರ್ ವಿಶ್ವನಾಥ್ ಗಂಭೀರ ಮುಖಭಾವದವರಾದರೂ ಉತ್ತಮ ಹಾಸ್ಯ ಪ್ರಜ್ಞೆ ಹೊಂದಿದ್ದಾರೆ. ಇವತ್ತು ಯಲಹಂಕದಲ್ಲಿ ನಡೆದ ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಮಾತಾಡಿದ ಅವರು ತಮ್ಮ ಬೀಗ ಬೈರತಿ ಸುರೇಶ್ (Byrathi Suresh) ಅವರ ಕಾಲೆಳೆದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಣ್ಣ, ಸಿದ್ರಾಮಣ್ಣ ಎಂದು ಸಂಬೋಧಿಸುವ ಅವರು, ಸುರೇಶ್ ಯಲಹಂಕ ಕ್ಷೇತ್ರದ ಅಭಿವೃದ್ಧಿಗೆ ನೀಡುತ್ತಿದ್ದ ಅನುದಾನವನ್ನು ಕಡಿಮೆ ಮಾಡಿದ್ದಾರೆ, ಅಣ್ಣ ಸಿದ್ರಾಮಣ್ಣ ನೀವಾದರೂ ಕೊಂಚ ಹೇಳಿ, ಬೀಗರು ಅಂತ ಕೊಡೋದು ಬೇಡ, ಯಲಹಂಕದ ಅಭಿವೃದ್ಧಿಗೆ ಅವರು ಕೊಡಲಿ ಎಂದು ಹೇಳಿದಾಗ ಅಲ್ಲಿದ್ದವರೆಲ್ಲ ನಕ್ಕಿದ್ದೇ ನಕ್ಕಿದ್ದು.

ಇದನ್ನೂ ಓದಿ:  ಪಾಕಿಸ್ತಾನಕ್ಕೆ ಪಾಠ ಕಲಿಸುವ ವಿಷಯದಲ್ಲಿ ಕಾಂಗ್ರೆಸ್ ನಾಯಕರ ಹೇಳಿಕೆಗಳು ಅರ್ಥಹೀನ, ಅಪ್ರಸ್ತುತ: ಎಸ್​ಆರ್ ವಿಶ್ವನಾಥ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ