AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಹೊರವಲಯದಲ್ಲಿ ಮತ್ತೇ ಸಕ್ರಿಯಗೊಂಡ ಚಡ್ಡಿ-ಧರಿಸುವ ಕಳ್ಳರ ಗ್ಯಾಂಗ್

ಬೆಂಗಳೂರು ಹೊರವಲಯದಲ್ಲಿ ಮತ್ತೇ ಸಕ್ರಿಯಗೊಂಡ ಚಡ್ಡಿ-ಧರಿಸುವ ಕಳ್ಳರ ಗ್ಯಾಂಗ್

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Oct 08, 2024 | 11:54 AM

Share

ಸಾಮಾನ್ಯವಾಗಿ ಕಳ್ಳರು ಜನರ ಮೇಲೆ ಹಲ್ಲೆ ನಡೆಸುವ ಪ್ರಯತ್ನ ಮಾಡಲ್ಲ, ಆದರೆ ಚಡ್ಡಿ ಧರಿಸುವ ಕಳ್ಳರ ಗುಂಪು ಆಯುಧ-ಸನ್ನದ್ಧರಾಗಿ ಕಳ್ಳತನಕ್ಕೆ ಬರುತ್ತಾರೆಂದರೆ ತಮಗೆ ಅಪಾಯ ಎದುರಾದಾಗ ದಾಳಿ ನಡೆಸಲು ತಯಾರಾಗಿರುತ್ತಾರೆ ಎಂದರ್ಥ. ಜನ ಕೊಂಚ ಹುಷಾರಾಗಿರಬೇಕು.

ಆನೇಕಲ್ (ಬೆಂಗಳೂರು): ನಗರದ ಹೊರವಲಯದಲ್ಲಿರುವ ಅಪಾರ್ಟ್​​ಮೆಂಟ್ ಮತ್ತು ವಿಲ್ಲಾಗಳಲ್ಲಿ ವಾಸ ಮಾಡುವ ಜನರು ಹೆಚ್ಚು ಜಾಗರೂಕರಾಗಿರಬೇಕಾದ ಅಗತ್ಯ ಎದುರಾಗಿದೆ. ಹಿಂದೆ ಹಲವು ಬಾರಿ ನಗರವಾಸಿಗಳನ್ನು ಆತಂಕಕ್ಕೀಡು ಮಾಡಿದ್ದ ಚಡ್ಡಿ ಧರಿಸಿ ಕಳ್ಳತನಕಗ್ಕಿಳಿಯುವ ಕಳ್ಳರ ಗ್ಯಾಂಗ್ ಪುನಃ ಸಕ್ರಿಯಗೊಂಡಿದೆ. ಸರ್ಜಾಪುರದ ಬಿಲ್ಲಾಪುರದಲ್ಲಿರುವ ಅಪಾರ್ಟ್​​ಮೆಂಟ್ ಒಂದರಲ್ಲಿ ಆಯುಧಗಳನ್ನು ಹೊಂದಿದ್ದ 5-ಸದಸ್ಯರ ಕಳ್ಳರ ಗ್ಯಾಂಗ್ ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕೆಮೆರಾಗಳಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ಶಾಕಿಂಗ್ ವಿಡಿಯೋ ವೈರಲ್

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.