AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru; ಜೆಡಿಎಸ್ ಪಕ್ಷದೊಂದಿಗೆ ಪ್ರತಾಪ್ ಸಿಂಹ ಹೊಂದಾಣಿಕೆ ಮಾಡಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ: ಎಂಪಿ ರೇಣುಕಾಚಾರ್ಯ

Bengaluru; ಜೆಡಿಎಸ್ ಪಕ್ಷದೊಂದಿಗೆ ಪ್ರತಾಪ್ ಸಿಂಹ ಹೊಂದಾಣಿಕೆ ಮಾಡಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ: ಎಂಪಿ ರೇಣುಕಾಚಾರ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 01, 2023 | 3:15 PM

ಪ್ರತಾಪ್​ ಸಿಂಹ ಒಬ್ಬ ಅಡ್ಜಸ್ಟ್ ಮೆಂಟ್ ರಾಜಕಾರಣಿ ಅಂತ ಬಹಳ ಜನರಿಗೆ ಗೊತ್ತಿದೆ ಎಂದು ರೇಣುಕಾಚಾರ್ಯ ಹೇಳಿದರು.

ಬೆಂಗಳೂರು: ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ (MP Renukacharya) ತಮ್ಮ ಪಕ್ಷದ ಕೆಲ ನಾಯಕರ ವಿರುದ್ಧ ಸಮರ ಸಾರಿದ್ದಾರೆ ಮತ್ತು ಅವರು ವಾಗ್ದಾಳಿ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಹಿರಿಯ ನಾಯಕ ಬಿಎಸ್ ಯಡಿಯೂರಪ್ಪರೊಂದಿಗೆ (BS Yediyurappa) ಮಾತಾಡಿ ಬಂದ ಬಳಿಕವೂ ಅವರು ಪಕ್ಷದ ಕೆಲ ನಾಯಕರನ್ನು ಗುರಿ ಮಾಡಿ ಕಿಡಿ ಕಾರಿದರು. ಇಂದು ಮೈಸೂರು ಸಂಸದ ಪ್ರತಾಪ್ ಸಿಂಹರನ್ನು (Pratap Simha) ಟಾರ್ಗೆಟ್ ಮಾಡಿ ರೇಣುಕಾಚಾರ್ಯ ಮಾತಾಡಿದರು. ಪ್ರತಾಪ್ ಸಿಂಹ ಮೈಸೂರಲ್ಲಿ ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆಯಲ್ಲಿ ಗೆದ್ದಿದ್ದು ಯಾರಿಗೆ ಗೊತ್ತಿಲ್ಲ? ಅವರೊಬ್ಬ ಅಡ್ಜಸ್ಟ್ ಮೆಂಟ್ ರಾಜಕಾರಣಿ ಅಂತ ಬಹಳ ಜನರಿಗೆ ಗೊತ್ತಿದೆ ಎಂದು ರೇಣುಕಾಚಾರ್ಯ ಹೇಳಿದರು. ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಬಿಎಸ್ ಯಡಿಯೂರಪ್ಪನವರ ಬಗ್ಗೆ ಟೀಕೆ ಮಾಡಲು ಇವರಱರಿಗೂ ನೈತಿಕ ಹಕ್ಕಿಲ್ಲ ಎಂದ ಅವರು ರಾಜ್ಯದಲ್ಲಿ ಪಕ್ಷದ ಸೋಲಿಗೆ ಒಳಮೀಸಲಾತಿ, ಓಪಿಎಸ್ ನೌಕರರು ಮತ್ತು 10 ಕೆಜಿ ಅಕ್ಕಿ ಕೊಡದೆ ಹೋಗಿದ್ದು ಕಾರಣ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ