Video: 17 ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿಟ್ಟುಕೊಂಡು ನಾನೇನು ಭಯೋತ್ಪಾದಕನಲ್ಲ ಎಂದಿದ್ದ ರೋಹಿತ್ ಆರ್ಯ
ಮುಂಬೈನ ಪೂವೈನಲ್ಲಿರುವ ಸ್ಟುಡಿಯೋದಲ್ಲಿ ರೋಹಿತ್ ಆರ್ಯ ಎಂಬಾತ 17 ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದ. ಗುರುವಾರ ಪೊಲೀಸರ ಗುಂಡೇಟಿಗೆ ಆತ ಬಲಿಯಾಗಿದ್ದ. ಆತ ಸಾಯುವುದಕ್ಕೂ ಮುನ್ನ ಬಿಡುಗಡೆ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಮುಂಬೈ ಪೊಲೀಸ್ ಮೂಲಗಳು ತಿಳಿಸುವಂತೆ ಆತ ನಾಗ್ಪುರದ ಯೂಟ್ಯೂಬರ್ ಮತ್ತು ಶಾಲಾ ಶಿಕ್ಷಕರಾಗಿದ್ದರು. ನಾನೇನು ಭಯೋತ್ಪಾದಕನಲ್ಲ, ಕೆಲವು ಜನರೊಂದಿಗೆ ಮಾತನಾಡಲು ಬಯಸುತ್ತೇನೆ, ಅದಕ್ಕೆ ಅನುಮತಿ ಮಾಡಿಕೊಡದಿದ್ದರೆ ಎಲ್ಲರನ್ನೂ ಬೆಂಕಿ ಹಚ್ಚಿ ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ
ಪುಣೆ, ಅಕ್ಟೋಬರ್ 31: ಮುಂಬೈನ ಪೂವೈನಲ್ಲಿರುವ ಸ್ಟುಡಿಯೋದಲ್ಲಿ ರೋಹಿತ್ ಆರ್ಯ ಎಂಬಾತ 17 ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದ. ಗುರುವಾರ ಪೊಲೀಸರ ಗುಂಡೇಟಿಗೆ ಆತ ಬಲಿಯಾಗಿದ್ದ. ಆತ ಸಾಯುವುದಕ್ಕೂ ಮುನ್ನ ಬಿಡುಗಡೆ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಮುಂಬೈ ಪೊಲೀಸ್ ಮೂಲಗಳು ತಿಳಿಸುವಂತೆ ಆತ ನಾಗ್ಪುರದ ಯೂಟ್ಯೂಬರ್ ಮತ್ತು ಶಾಲಾ ಶಿಕ್ಷಕರಾಗಿದ್ದರು. ನಾನೇನು ಭಯೋತ್ಪಾದಕನಲ್ಲ, ಕೆಲವು ಜನರೊಂದಿಗೆ ಮಾತನಾಡಲು ಬಯಸುತ್ತೇನೆ, ಅದಕ್ಕೆ ಅನುಮತಿ ಮಾಡಿಕೊಡದಿದ್ದರೆ ಎಲ್ಲರನ್ನೂ ಬೆಂಕಿ ಹಚ್ಚಿ ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ನನಗೆ ಹೆಚ್ಚಿನ ಬೇಡಿಕೆಗಳಿಲ್ಲ, ಕೆಲವು ನೈತಿಕ ಬೇಡಿಕೆಗಳಷ್ಟೇ, ಹೆಚ್ಚು ಹಣವನ್ನೂ ಕೇಳುವುದಿಲ್ಲ, ಕೆಲವು ಪ್ರಶ್ನೆಗಳಿವೆ, ಅದಕ್ಕೆ ಉತ್ತರ ಬೇಕು ಎಂದು ವಿಡಿಯೋದಲ್ಲಿ ಹೇಳಿದ್ದ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

