ದಾವಣಗೆರೆ: ಜೈಲಿನಿಂದ ಬಂದ ಮುರುಘಾಶ್ರೀ ವಾಸ್ತವ್ಯ ಎಲ್ಲಿ?

ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ನ.16) ಜೈಲಿನಿಂದ ಮುರಘಾ ಶರಣರು(Murugha Math Swamiji) ಬಿಡುಗಡೆಯಾಗಿದ್ದಾರೆ. ಈ ವೇಳೆ ದಾವಣಗೆರೆ(Davanagere)ಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಭಾವುಕರಾಗಿ ಮಾತನಾಡಿದ ಅವರು ‘ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಎಲ್ಲದಕ್ಕೂ ವಕೀಲರು ಹೇಳ್ತಾರೆ, ಮೌನವಾಗಿರುವುದೇ ಒಳ್ಳೆಯದು ಎಂದರು.

ದಾವಣಗೆರೆ: ಜೈಲಿನಿಂದ ಬಂದ ಮುರುಘಾಶ್ರೀ ವಾಸ್ತವ್ಯ ಎಲ್ಲಿ?
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 16, 2023 | 8:24 PM

ದಾವಣಗೆರೆ, ನ.16: ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ನ.16) ಜೈಲಿನಿಂದ ಮುರಘಾ ಶರಣರು(Murugha Math Swamiji) ಬಿಡುಗಡೆಯಾಗಿದ್ದಾರೆ. ಈ ವೇಳೆ ದಾವಣಗೆರೆ(Davanagere)ಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಭಾವುಕರಾಗಿ ಮಾತನಾಡಿದ ಅವರು ‘ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಎಲ್ಲದಕ್ಕೂ ವಕೀಲರು ಹೇಳ್ತಾರೆ, ಮೌನವಾಗಿರುವುದೇ ಒಳ್ಳೆಯದು ಎಂದರು. ಇನ್ನು ಚಿತ್ರದುರ್ಗಕ್ಕೆ ನಿರ್ಬಂಧ ಹಿನ್ನಲೆ ದಾವಣಗೆರೆ ವಿರಕ್ತಮಠದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ವಿರಕ್ತಮಠದಲ್ಲಿ ಇರುವ ಸ್ವಾಮೀಜಿಗಳ ಭೇಟಿ ಮಾಡಿ ಕೆಲ ಹೊತ್ತು ಮಾತುಕತೆ ನಡೆಸಿದ್ದು, ಅಲ್ಲೆ ಇರಲು ತೀರ್ಮಾನಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 8:24 pm, Thu, 16 November 23

Follow us