AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಹರಂ ಕೊನೆ ದಿನದಂದು ಕೇಸರಿ ವಸ್ತ್ರ ಹಿಡಿದು ರಾಜಕೀಯ ಭವಿಷ್ಯ ನುಡಿದ ಲಾಲಸಾಬ್, ವಿಡಿಯೋ ವೈರಲ್

ಮೊಹರಂ ಕೊನೆ ದಿನದಂದು ಕೇಸರಿ ವಸ್ತ್ರ ಹಿಡಿದು ರಾಜಕೀಯ ಭವಿಷ್ಯ ನುಡಿದ ಲಾಲಸಾಬ್, ವಿಡಿಯೋ ವೈರಲ್

ರವಿ ಹೆಚ್ ಮೂಕಿ, ಕಲಘಟಗಿ
| Updated By: ರಮೇಶ್ ಬಿ. ಜವಳಗೇರಾ

Updated on: Jul 30, 2023 | 10:40 AM

ಹೆಬ್ಬಳ್ಳಿ ಗ್ರಾಮದ ಪ್ರಸಿದ್ದ ಲಾಲಸಾಬವಲಿ ಎನ್ನುವರು ದರ್ಗಾದಲ್ಲಿ ನಿಂತು ಕೇಸರಿ ವಸ್ತ್ರ ಹಿಡಿದು ರಾಜಕೀಯ ಭವಿಷ್ಯ ನುಡಿದಿದ್ದು, ಇದೀಗ ಲಾಲಸಾಬ್ ಅಜ್ಜನ‌ ಭವಿಷ್ಯವಾಣಿ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬಾಗಲಕೋಟೆ, (ಜುಲೈ 30): ನಿನ್ನೆ(ಜುಲೈ 39) ಮೊಹರಂ ಕೊನೆ ದಿನ ಅದ್ಧೂರಿಯಾಗಿ ಸಂಪನ್ನಗೊಂಡಿದೆ. ಇದರ ಮಧ್ಯೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಕೇಸರಿ ವಸ್ತ್ರ ಹಿಡಿದು ಅಜ್ಜಲಾಲಸಾಬ್ ಎನ್ನುವರು ರಾಜಕೀಯ ಭವಿಷ್ಯ ನುಡಿದಿದ್ದಾರೆ. ಕೇಸರಿ‌ವಸ್ತ್ರ ಹಿಡಿದು ಇದರ ಸಲುವಾಗಿ ಬಹಳ ಬಡಿದಾಡುತ್ತಾರೆ. ಇದರ‌ ಸಲುವಾಗಿ ಹೆಣಗಳು ಬೀಳುತ್ತಿವೆ. ಆದರೆ ಬರೆದು ಇಟ್ಟುಕೊಳ್ಳಿ, ಖುರ್ಚಿ ‌ಮಾತ್ರ ಅದ ಗಟ್ಟಿ ಪಾ ಎಂದು ಕೇಸರಿ ವಸ್ತ್ರ ತೂರಿದ್ದಾರೆ. ಇದರೊಂದಿಗೆ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯುವುದು ಫಿಕ್ಸ್​ ಎಂದು ಜನರು ವಿಶ್ಲೇಷಣೆ ಮಾಡಿದ್ದಾರೆ. ಇದೀಗ ಕೇಸರಿ ವಸ್ತ್ರ ಹಿಡಿದು ಹೆಬ್ಬಳ್ಳಿ ಗ್ರಾಮದ ಪ್ರಸಿದ್ದ ಲಾಲಸಾಬವಲಿ ದರ್ಗಾದಲ್ಲಿ ಭವಿಷ್ಯ ನುಡಿದಿರುವ ಲಾಲಸಾಬ್ ಅಜ್ಜನ‌ ಭವಿಷ್ಯವಾಣಿ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.