ಬೆಂಗಳೂರು: ಆಹಾರ (food) ಹಾಳು ಮಾಡುವುದು ಮಹಾಪಾಪ ಅಂತ ಎಲ್ಲರಿಗೂ ಗೊತ್ತು, ಆದರೂ ನಮಲ್ಲಿ ಬಹಳಷ್ಟು ಅದನ್ನು ಮಾಡುತ್ತೇವೆ. ಆಹಾರ ಕೆಡದಂತಿರಲು ಕೆಲ ಸರಳ ಉಪಾಯಗಳ ಬಗ್ಗೆ ಯೋಚಿಸುವ ಅಗತ್ಯವಿದೆ. ಕುಟುಂಬದ ಸದಸ್ಯರಿಗೆ (family members) ಎಷ್ಟು ಅಹಾರ ಬೇಕಾಗುತ್ತದೆಯೋ ಅಷ್ಟು ಮಾತ್ರ ತಯಾರಿಸಿದರೆ ಹಾಳಾಗುವುದನ್ನು (being wasted) ತಡೆಯಬಹುದು. ಅಡುಗೆಗೆ ಅಂತ ಕೊಂಡುತರುವ ತರಕಾರಿ, ಕಾಯಿಪಲ್ಲೆ ಮತ್ತು ಹಣ್ಣುಗಳನ್ನು ಕೊಳೆಯುವಂತೆ ಮಾಡಬಾರದು. ಒಂದು ಪಕ್ಷ ತರಕಾರಿ ಕೊಳೆತರೂ ಅದನ್ನು ಕಾಂಪೋಸ್ಟ್ ಡಬ್ಬಕ್ಕೆ ಹಾಕಬೇಕು. ಮಧ್ಯಾಹ್ನ ಮಾಡಿದ ಅಡುಗೆ ಉಳಿದರೆ ಡಿನ್ನರ್ ಗೆ ಅದನ್ನು ಬಿಸಿ ಮಾಡಿಕೊಂಡು ತಿಂದರೆ ಆರೋಗ್ಯವೇನೂ ಹಾಳಾಗದು. ಪೋಷಕಾಂಶ ಭರಿತ ಆಹಾರವನ್ನು ಪ್ರತಿನಿತ್ಯ ಸೇವಿಸಬೇಕು ಆದರೆ ಆದರೆ ಯಾವ ಕಾರಣಕ್ಕೂ ವೇಸ್ಟ್ ಮಾಡಬಾರದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:01 pm, Wed, 9 August 23