ಮೈಸೂರು, ಸೆಪ್ಟೆಂಬರ್4: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಬಂದಿರುವ ಗಜಪಡೆಗೆ ತರಬೇತಿ ಆರಂಭವಾಗಿದೆ. ದಸರಾ ಮಹೋತ್ಸವಕ್ಕೆ ಭರದಿಂದ ಸಿದ್ಧತೆ ಸಾಗಿದೆ. ಈ ಮಧ್ಯೆ, ಮಾವುತರು ಕಾವಾಡಿಗಳ ಮಕ್ಕಳ ಜೊತೆ ಸಚಿವ ಹೆಚ್ಸಿ ಮಹದೇವಪ್ಪ ಮೈಸೂರು ಅರಮನೆಯಲ್ಲಿ ತುಸು ಹೊತ್ತು ವಾಲಿಬಾಲ್ ಆಡಿದರು.
ಇಂದು ದಸರಾ ಸಿದ್ದತಾ ಪರಿಶೀಲನಾ ಸಭೆ ನಡೆಯುತ್ತಿದ್ದು, ಅದರಲ್ಲಿ ಭಾಗವಹಿಸಲು ಸಚಿವ ಮಹದೇವಪ್ಪ ಆಗಮಿಸಿದ್ದಾರೆ. ಈ ವೇಳೆ ಆನೆಗಳನ್ನು ವೀಕ್ಷಿಸಿದ ಅವರು ಮಾವುತರು, ಕಾವಾಡಿಗಳ ಜೊತೆ ಕಾಲ ಕಳೆದರು. ನಂತರ ವಾಲಿಬಾಲ್ ಆಡಿ ಗಮನಸೆಳೆದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ