AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಹಾಸ್ ಶೆಟ್ಟಿಯ ಹತ್ಯೆ ಮತ್ತು ನಿನ್ನೆಯ ಬಂದ್​ ಬಳಿಕ ಸಹಜ ಸ್ಥಿತಿಗೆ ಮರಳುತ್ತಿರುವ ಮಂಗಳೂರು

ಸುಹಾಸ್ ಶೆಟ್ಟಿಯ ಹತ್ಯೆ ಮತ್ತು ನಿನ್ನೆಯ ಬಂದ್​ ಬಳಿಕ ಸಹಜ ಸ್ಥಿತಿಗೆ ಮರಳುತ್ತಿರುವ ಮಂಗಳೂರು

ಅರುಣ್​ ಕುಮಾರ್​ ಬೆಳ್ಳಿ
|

Updated on:May 03, 2025 | 11:17 AM

ಮಂಗಳೂರಲ್ಲಿ ಜನರ ಮತ್ತು ವಾಹನಗಳ ಓಡಾಟ ನೋಡಿ ಎಲ್ಲ ಮಾಮೂಲಿನಂತಿದೆ ಅನಿಸೋದು ನಿಜವಾದರೂ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬೂದಿ ಮುಚ್ಚಿದ ಕೆಂಡದಂಥ ಸ್ಥಿತಿ ಇದೆ. ಮೇ 1 ರಂದು ಹಂತಕರಿಗೆ ಬಲಿಯಾದ ಸುಹಾಸ ಶೆಟ್ಟಿಯ ಅಂತಿಮ ಸಂಸ್ಕಾರ ನಿನ್ನೆ ನೆರವೇರಿತು. ಜಿಲ್ಲಾಡಳಿತ ಮೇ 6 ರವರೆಗೆ ಸೆಕ್ಷನ್ 144ಜಾರಿಯಲ್ಲಿಟ್ಟಿದೆ, ಜನ ಗುಂಪುಗಳನ್ನು ಕಟ್ಟಿಕೊಂಡು ಓಡಾಡುವಂತಿಲ್ಲ.

ಮಂಗಳೂರು, ಮೇ 3: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಕೊಲೆ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ (Vishwa Hindu Parishat) ಮತ್ತು ಬಜರಂಗ ದಳ ಸಂಘಟನೆಗಳು ನಿನ್ನೆ ಮಂಗಳೂರು ಬಂದ್ ಗೆ ಕರೆ ನೀಡಿದ್ದವು, ನಗರ ಅಕ್ಷರಶಃ ಸ್ತಬ್ಧವಾಗಿತ್ತು. ಇವತ್ತು ಬಂದರು ನಗರದಲ್ಲಿ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ ಎಂದು ನಮ್ಮ ಮಂಗಳೂರು ವರದಿಗಾರ ಹೇಳುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್​ಗಳದ್ದೇ ಹೆಚ್ಚು ಕಾರುಬಾರು. ಖಾಸಗಿ ಸೇರಿದಂತೆ ಸರ್ಕಾರೀ ಬಸ್ ಗಳ ಸೇವೆ ಅರಂಭವಾಗಿದೆ ಮತ್ತು ಅಂಗಡಿ ಮುಂಗಟ್ಟುಗಳು ತೆರೆದುಕೊಂಡಿದ್ದು ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ.

ಇದನ್ನೂ ಓದಿ:  ಸುಹಾಸ್​ಗೆ ನಿನ್ನೆ ಊರಿಗೆ ಬಾ ಅಂತ ಹೇಳಿದ್ದೆ, ಅದರೆ ಬರಲಿಲ್ಲ, ಕೊಲೆ ಸುದ್ದಿ ಬಂತು: ಮೋಹನ್ ಶೆಟ್ಟಿ, ಸುಹಾಸ್ ತಂದೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 03, 2025 10:40 AM