ಕೇಂದ್ರದ ಮಂತ್ರಿಯೊಬ್ಬರನ್ನು ಮನಬಂದಂತೆ ಹೀಯಾಳಿಸಿರುವ ಅಧಿಕಾರಿಯ ವಿರುದ್ಧ ಕ್ರಮ ಯಾಕಿಲ್ಲ? ಪ್ರಲ್ಹಾದ್ ಜೋಶಿ
ದ್ವಿತೀಯ ದರ್ಜೆ ಗುಮಾಸ್ತರೊಬ್ಬರು ಸಾವಿಗೆ ಶರಣಾಗುವ ಮುನ್ನ ಬರೆದಿಟ್ಟಿರುವ ಡೆತ್ನೋಟ್ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತನ ಹೆಸರು ಉಲ್ಲೇಖಿಸಿರುವುದಕ್ಕೆ ಪ್ರತಿಕ್ರಿಯಿಸಿದ ಜೋಶಿ, ಇದಕ್ಕೆಲ್ಲ ಗ್ಯಾರಂಟಿಗಳು ಕಾರಣ, ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆಯಾಗುತ್ತಿದ್ದ ದುಡ್ಡಲ್ಲಿ ಕಮೀಶನ್ ಪಡೆಯುತ್ತಿದ್ದ ಶಾಸಕರು ಮತ್ತು ಮಂತ್ರಿಗಳು ಈಗ ವರ್ಗಾವಣೆಯನ್ನು ಧಂದೆ ಮಾಡಿಕೊಂಡಿದ್ದಾರೆ ಎಂದರು.
ದೆಹಲಿ: ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ದಾಖಲಾಗಿರುವ ಎಫ್ಐಆರ್ ಗೆ ಪ್ರತಿಕ್ರಿಯೆ ನೀಡುತ್ತಾ, ಸಿದ್ದರಾಮಯ್ಯ ಸರ್ಕಾರ ಅಧಿಕಾರಿಗಳ ಮೂಲಕ ವಿರೋಧ ಪಕ್ಷದ ನಾಯಕರನ್ನು ಬೆದರಿಸುವ ಕೆಲಸ ಮಾಡುತ್ತಿದೆ, ಆ ಅಧಿಕಾರಿ ಭಾರತದ ಸರ್ಕಾರದ ಮಂತ್ರಿಯೊಬ್ಬರ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿದ್ದಾನೆ, ರಾಜ್ಯ ಸರ್ಕಾರ ಯಾಕೆ ಅವರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಚಿವ ಜಮೀರ್ ಅಹ್ಮದ್ ಹೇಳಿದಂತೆ ಕುಣಿಯುತ್ತಿದ್ದಾರೆಂದು ಅಧಿಕಾರಿಗಳನ್ನು ಎಚ್ಚರಿಸಿದ ಪ್ರಲ್ಹಾದ್ ಜೋಶಿ
Loading...
Unable to load recommendations.
Follow Us