Pancharatna Yatre:  ಹೆಚ್ ಡಿ ಕುಮಾರಸ್ವಾಮಿ ಭಾಷಣ ಮಾಡುವಾಗ ವೃದ್ಧೆಯೊಬ್ಬರು ವೇದಿಕೆ ಬಳಿ ಬಂದು ಅಳಲು ತೋಡಿಕೊಂಡರು

ಅರುಣ್​ ಕುಮಾರ್​ ಬೆಳ್ಳಿ

Updated on: Mar 15, 2023 | 6:02 PM

ರೇವಣ್ಣ ಮಹಿಳೆಗೆ ದೂರ ಹೋಗು ಎಂದರೆ ಕುಮಾರಸ್ವಾಮಿ ಮೊದಲು ನಿರ್ಲಕ್ಷಿಸಿದರೂ ನಂತರ ಆಕೆಯ ಮಾತನ್ನು ಆಲಿಸುತ್ತಾರೆ. ಮಹಿಳೆ ಹೇಳಿದ್ದೇನು ಅಂತ ಗೊತ್ತಾಗಿಲ್ಲ

ಹಾಸನ: ಪಕ್ಷದ ಪಂಚರತ್ನ ಯಾತ್ರೆ ಭಾಗವಾಗಿ ಜಿಲ್ಲೆಯ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಹಲವಾರು ಕಡೆಗಳಲ್ಲಿ ಹೆಚ್ ಡಿ ಕುಮಾರಸ್ವಾಮಿ, (HD Kumaraswamy) ಹೆಚ್ ಡಿ ರೇವಣ್ಣ (HD Revanna), ಸೂರಜ್ ರೇವಣ್ಣ ಮತ್ತು ಕಾರ್ಯಕರ್ತರು ರೋಡ್ ಶೋ (road show) ನಡೆಸಿದರು. ಹೊಳೆನರಸೀಪುರದಲ್ಲಿ ಬೃಹತ್ ಸಮಾವೇಶವೊಂದನ್ನು ಉದ್ದೇಶಿಸಿ ಕುಮಾರಸ್ವಾಮಿಯವರು ಮಾತಾಡುತ್ತಿದ್ದಾಗ ಹಿರಿಯ ಮಹಿಳೆಯೊಬ್ಬರು ವೇದಿಕೆ ಮುಂದೆ ಬಂದು ತನ್ನ ಅಳಲು ತೋಡಿಕೊಳ್ಳುವ ಪ್ರಯತ್ನ ಮಾಡಿದರು. ರೇವಣ್ಣ ಆಕೆಗೆ ದೂರ ಹೋಗು ಎಂದರೆ ಕುಮಾರಸ್ವಾಮಿ ಮೊದಲು ನಿರ್ಲಕ್ಷಿಸಿದರೂ ನಂತರ ಆಕೆಯ ಮಾತನ್ನು ಆಲಿಸುತ್ತಾರೆ. ಮಹಿಳೆ ಹೇಳಿದ್ದೇನು ಅಂತ ನಮಗೆ ಗೊತ್ತಾಗಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.