ಕ್ರಾಂತಿ ಅಲ್ಲದಿದ್ದರೆ ವಾಂತಿ ಮಾಡಲು ಡಿನ್ನರ್ ಮೀಟಿಂಗ್ ಕರೆದಿದ್ರಾ?: ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ
ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿ ಆಗೋದು ಫಿಕ್ಸ್. ಹೀಗಾಗಿಯೇ ಸಿಎಂ ಸಿದ್ದರಾಮಯ್ಯ ಸಚಿವರ ಡಿನ್ನರ್ ಮೀಟಿಂಗ್ ಕರೆದಿದ್ದರು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ. ರಾಜ್ಯದಲ್ಲಿ RSS ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಚಿಂತನೆ ವಿಚಾರವಾಗಿಯೂ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು, ಅಕ್ಟೋಬರ್ 14: ರಾಜ್ಯದಲ್ಲಿ RSS ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಧಮ್ ರಾಜ್ಯ ಸರ್ಕಾರಕ್ಕೆ ಇರುವಂತೆ ಕಾಣಿಸುತ್ತಿಲ್ಲ. ಇವರನ್ನು ವಜಾ ಮಾಡುವ ಅಧಿಕಾರ ಇರುವ ಗವರ್ನರ್, ರಾಷ್ಟ್ರಪತಿ ಕೂಡಾ ಆರೆಸ್ಸೆಸ್ಸಿನವರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R. Ashok) ಹೇಳಿದ್ದಾರೆ. ರಾಜ್ಯದಲ್ಲಿರೋದು ಬಿದ್ದು ಹೋಗುವ ಸರ್ಕಾರ. ಕ್ರಾಂತಿ ಇರುವುದಕ್ಕೇ ಡಿನ್ನರ್ ಮೀಟಿಂಗ್ ಮಾಡಿರೋದು. ಇಲ್ಲದಿದ್ದರೆ ಇನ್ನೇನು ವಾಂತಿ ಮಾಡಲು ಡಿನ್ನರ್ ಮೀಟಿಂಗ್ ಕರೆದಿದ್ರಾ? ಎಂದು ಅವರು ಪ್ರಶ್ನಿಸಿದ್ದು, ನಾವು ಹೇಳಿದ ಕ್ರಾಂತಿ ಈಗ ಕಾಂಗ್ರೆಸ್ ನಲ್ಲಿ ಶುರುವಾಗಿದೆ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
