ಮೋದಿ ಮೆಚ್ಚುಗೆಗೆ ಬಾಗಲಕೋಟೆಯ ಪದಗಾರ ವೆಂಕಪ್ಪ ಸುಗತೇಕರ್ ಫುಲ್ ಖುಷ್

Edited By:

Updated on: Feb 25, 2024 | 3:57 PM

ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಇಂದು (ಫೆ.25) ನಡೆಸಿಕೊಟ್ಟ 110ನೇ ಮನ್​ ಕೀ ಬಾತ್ (Mann Ki Baat)​ (ರೇಡಿಯೋ ಕಾರ್ಯಕ್ರಮದಲ್ಲಿ ಬಾಗಲಕೋಟೆಯ (Bagalakote) ಗೊಂದಲಿ ಪದ (Gondhali Pada) ಹಾಡುಗಾರ ವೆಂಕಪ್ಪ ಅಂಬಾಜಿ ಸುಗತೇಕರ್ (Venkappa Ambaji Sugtekr) ಅವರನ್ನು ಗುಣಗಾನ ಮಾಡಿದರು. ಈ ಹಿನ್ನಲೆ ವೆಂಕಪ್ಪ ಅವರು, ಮನೆಯಲ್ಲಿ ಮಕ್ಕಳ‌ ಜೊತೆ ಗೊಂದಲಿ ಪದ ಹಾಡುವ ಮೂಲಕ ಸಂತಸಪಟ್ಟಿದ್ದಾರೆ.

ಬಾಗಲಕೋಟೆ, ಫೆ.25: ಬಾಗಲಕೋಟೆ (Bagalakote) ನವನಗರದ ನಿವಾಸಿ ಗೊಂದಲಿ ಪದ ಹಾಡುಗಾರನ ಬಗ್ಗೆ ಮನ್ ಕಿ ಬಾತ್​ನಲ್ಲಿ ಮೋದಿ ಗುಣಗಾನ ಹಿನ್ನೆಲೆ ಗೊಂದಲಿ ಪದಗಾರ ವೆಂಕಪ್ಪ ಸುಗತೇಕರ್(Venkappa Ambaji Sugatekar) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮನೆಯಲ್ಲಿ ಮಕ್ಕಳ‌ ಜೊತೆ ಗೊಂದಲಿ ಪದ ಹಾಡುವ ಮೂಲಕ ಸಂತಸಪಟ್ಟಿದ್ದಾರೆ. ಈ ಕುರಿತು ಟಿವಿ9 ಜೊತೆ ಮಾತನಾಡಿದ ಅವರು, ‘ ಮೋದಿ ಅವರು ನಮ್ಮ ಬಗ್ಗೆ ಮಾತಾಡಿದ್ದು ಕೇಳಿ ಬಹಳ ಆನಂದವಾಯಿತು. ನಮ್ಮ ಈ ಸೇವೆ ಪೂರ್ವಜರಿಂದ ಬಂದಿದೆ. ನಾನು ಓದಿಲ್ಲ, ನಮ್ಮ ತಂದೆ ಹಾಗೂ ಅಜ್ಜ ಕೂಡ ಓದಿಲ್ಲ. ಬರಿ ಪದ ಕಲಿಸುತ್ತಿದ್ದರು, ಕಥೆ ಹೇಳುತ್ತಿದ್ದರು. ಅಂಬಾಭವಾನಿ ಆಶೀರ್ವಾದದಿಂದ ಆಕಾಶವಾಣಿ, ದೂರದರ್ಶನ ಸೇರಿದಂತೆ ಎಲ್ಲ ಕಡೆ ಹಾಡಿದ್ದೇನೆ. ಇದೀಗ ನಮ್ಮನ್ನ ಗುರುತಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಮ್ಮನ್ನು ಹೊಗಳಿದಾರೆ ಅಂದರೆ ಜೀವನ ಸಾರ್ಥಕವಾಯ್ತು. ಇಂತಹ ವಯಸ್ಸಲ್ಲೂ ನಾವು ಇದೇ ಸೇವೆ ಮಾಡುತ್ತೀವಿ. ಎಲ್ಲರೂ ನಮಗೆ ಆಹ್ವಾನ ನೀಡುತ್ತಾರೆ. ಇನ್ನು ನನ್ನ ಮಕ್ಕಳು ಹಾಗೂ ಮೊಮ್ಮಕ್ಕಳು ಕೂಡ ಗೊಂದಲಿ ಪದ ಸಂಪ್ರದಾಯ ಮುಂದುವರೆಸಿದ್ದಾರೆ ಎಂದು ಸಂತಸ ಹಂಚಿಕೊಂಡರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow Us
Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More