ಉಗ್ರರ ದಾಳಿ ನಡೆದ 1 ತಿಂಗಳ ನಂತರ ಪಹಲ್ಗಾಮ್​ನ ಬೇತಾಬ್ ಕಣಿವೆ ಪ್ರವಾಸಿಗರಿಗೆ ಓಪನ್

Updated on: May 27, 2025 | 3:56 PM

ಏಪ್ರಿಲ್ 22ರಂದು ಕಾಶ್ಮೀರದ ಕಣಿವೆಯನ್ನು ಬೆಚ್ಚಿಬೀಳಿಸಿ ದೇಶಾದ್ಯಂತ ಆಘಾತಕಾರಿ ಅಲೆಗಳನ್ನು ಸೃಷ್ಟಿಸಿದ್ದ ಭಯೋತ್ಪಾದಕ ದಾಳಿಯ ನಂತರ, ಪಹಲ್ಗಾಮ್ ಸುತ್ತಮುತ್ತಲಿನ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ಇಂದು ತೆರೆಯಲಾಯಿತು. ಇಂದು ಸಾರ್ವಜನಿಕರಿಗೆ ತೆರೆಯಲಾದ ಪ್ರೇಕ್ಷಣೀಯ ಸ್ಥಳಗಳಲ್ಲಿ ಜನಪ್ರಿಯ ಬೇತಾಬ್ ಕಣಿವೆಯೂ ಸೇರಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಈ ಸ್ಥಳಗಳನ್ನು ಮುಚ್ಚಲಾಗಿತ್ತು.

ಶ್ರೀನಗರ, ಮೇ 27: ಒಂದು ತಿಂಗಳ ಕಾಲ ಮುಚ್ಚಿದ್ದ ಪಹಲ್ಗಾಮ್​ನ ಪ್ರಸಿದ್ಧ ಬೇತಾಬ್ ಕಣಿವೆ (Betaab Valley) ಸೇರಿದಂತೆ ಪಹಲ್ಗಾಮ್ ಸುತ್ತಮುತ್ತಲಿನ ಜನಪ್ರಿಯ ಪ್ರವಾಸಿ ತಾಣಗಳು ಮತ್ತೆ ತೆರೆಯಲ್ಪಟ್ಟಿವೆ. ಕಾಶ್ಮೀರದ ಪ್ರವಾಸೋದ್ಯಮ ವಲಯವನ್ನು ಪುನರುಜ್ಜೀವನಗೊಳಿಸುವ ಮತ್ತು ಪ್ರವಾಸಿಗರು ನಿರಾಸೆಯಿಂದ ಹೊರಹೋಗುವುದನ್ನು ತಡೆಯುವ ಗುರಿಯನ್ನು ಈ ನಿರ್ಧಾರ ಹೊಂದಿದೆ. ಭದ್ರತಾ ಕಾರಣಗಳಿಗಾಗಿ ಜಮ್ಮು ಕಾಶ್ಮೀರದ 8 ಜಿಲ್ಲೆಗಳಲ್ಲಿ 48 ತಾಣಗಳನ್ನು ಆರಂಭಿಕವಾಗಿ ಮುಚ್ಚಿದ್ದಕ್ಕೆ ಟೀಕೆಗಳು ಬಂದ ನಂತರ ಪಹಲ್ಗಾಮ್​ನ ಪ್ರವಾಸಿ ತಾಣಗಳು ಮತ್ತೆ ತೆರೆಯಲ್ಪಟ್ಟಿವೆ.

ಏಪ್ರಿಲ್ 22ರಂದು ಕಾಶ್ಮೀರದ ಕಣಿವೆಯನ್ನು ಬೆಚ್ಚಿಬೀಳಿಸಿ ದೇಶಾದ್ಯಂತ ಆಘಾತಕಾರಿ ಅಲೆಗಳನ್ನು ಸೃಷ್ಟಿಸಿದ್ದ ಭಯೋತ್ಪಾದಕ ದಾಳಿಯ ನಂತರ, ಪಹಲ್ಗಾಮ್ ಸುತ್ತಮುತ್ತಲಿನ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ಇಂದು ತೆರೆಯಲಾಯಿತು. ಇಂದು ಸಾರ್ವಜನಿಕರಿಗೆ ತೆರೆಯಲಾದ ಪ್ರೇಕ್ಷಣೀಯ ಸ್ಥಳಗಳಲ್ಲಿ ಜನಪ್ರಿಯ ಬೇತಾಬ್ ಕಣಿವೆಯೂ ಸೇರಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಈ ಸ್ಥಳಗಳನ್ನು ಮುಚ್ಚಲಾಗಿತ್ತು.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More