AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ಯೋಧರಲ್ಲಿ ಸ್ಥೈರ್ಯ ತುಂಬಲು ಶ್ರೀರಾಮಸೇನೆಯಿಂದ ಪರಶುರಾಮ ಜಯಂತಿ: ಮುತಾಲಿಕ್

ಭಾರತೀಯ ಯೋಧರಲ್ಲಿ ಸ್ಥೈರ್ಯ ತುಂಬಲು ಶ್ರೀರಾಮಸೇನೆಯಿಂದ ಪರಶುರಾಮ ಜಯಂತಿ: ಮುತಾಲಿಕ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 29, 2025 | 12:37 PM

ಧಾರ್ಮಿಕ ಕಾರ್ಯಗಳೆಲ್ಲ ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿವೆ, ಉಗ್ರರ ದಾಳಿ ಘಟನೆ ಹಿನ್ನೆಲೆ ಯಾವುದೇ ವೈಭವೀಕರಣ ಬೇಡವೆಂದು ಶೋಭಾಯಾತ್ರೆ ಮಾಡುತ್ತಿಲ್ಲ ಎಂದು ಮುತಾಲಿಕ್ ಹೇಳಿದರು. ಅದರ ಬದಲಿಗೆ ಶ್ರೀಗಳನ್ನು, ಪರಶುರಾಮ್ ಮೂರ್ತಿ ಮತ್ತು ಕೊಡಲಿಯನ್ನು ಹತ್ತಿರದಲ್ಲೇ ಇರುವ ರಾಮಮಂದಿರದಿಂದ ಧರ್ಮಸಭೆ ನಡೆಯುವ ಸ್ಥಳಕ್ಕೆ ಮೆರವಣಿಗೆಯಲ್ಲಿ ತರಲಾಗುವುದು ಎಂದು ಅವರು ಹೇಳಿದರು.

ಬೆಂಗಳೂರು, ಏಪ್ರಿಲ್ 29: ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮಡಿದರಿಗೆ ಸಂತಾಪ ಸೂಚಿಸಲು ಮತ್ತು ಈ ಘಟನೆಗೆ ಸಂಬಂಧಿಸಿದಂತೆ ಉಗ್ರರಿಗೆ (terrorists), ಅವರ ಪೋಷಕರಿಗೆ ತಕ್ಕ ಉತ್ತರ ನೀಡಲು ಹಾಗೂ ನಮ್ಮ ದೇಶದ ಯೋಧರಲ್ಲಿ ಧೈರ್ಯ ಮತ್ತು ಸ್ಥೈರ್ಯ ತುಂಬಲು ಪರಶುರಾಮ್ ಜಯಂತಿ ಆಚರಿಸಲಾಗುತ್ತಿದೆ, ಸಮಾಜಕ್ಕೂ ಧೈರ್ಯ ತುಂಬಲು ಹೋಮ ಯಜ್ಞಗಳನ್ನು ನೆರವೇರಿಸಲಾಗುತ್ತಿದೆ ಎಂದು ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು. ಹಿಂದೂ ಧರ್ಮದ ಬಲವರ್ಧನೆ ಮತ್ತು ಭಾರತದಲ್ಲಿದ್ದುಕೊಂಡು ಪಾಕಿಸ್ತಾನದ ಪರ ಘೋಷಣೆ ಕೂಗುವವರು ನಿರ್ನಾಮವಾಗಬೇಕು ಎಂಬ ಉದ್ದೇಶವೂ ಪರಶುರಾಮ್ ಜಯಂತಿ ಆಚರಣೆಯ ಭಾಗವಾಗಿದೆ ಎಂದು ಮುತಾಲಿಕ್ ಹೇಳಿದರು.

ಇದನ್ನೂ ಓದಿ: ನರಸತ್ತವರ ರೀತಿ ವರ್ತಿಸಬೇಡಿ ಮಠಾಧಿಪತಿಗಳೇ: ಪ್ರಮೋದ್ ಮುತಾಲಿಕ್ ಕೆಂಡಾಮಂಡಲ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ