ನವದೆಹಲಿ, ಸೆ.23: ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ (G20 Summit 2023) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇನ್ಸ್ಪೆಕ್ಟರ್ ಅವರಲ್ಲಿ ಅನುಭವ ಹಂಚಿಕೊಳ್ಳಲು ಹೇಳಿದಾಗ ತಾಯಿ ಕಳೆದುಕೊಂಡ ದುಃಖದ ನಡುವೆ ಕರ್ತವ್ಯ ನಿರ್ವಹಿಸಿದ್ದನ್ನು ಹೇಳಿಕೊಂಡರು. ಇವರ ಕರ್ತವ್ಯ ನಿಷ್ಠೆಗೆ ಮೋದಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಭಾರತ್ ಮಂಟಪದ ಮೀಟಿಂಗ್ ರೂಮ್ನಲ್ಲಿ ಭದ್ರತಾ ನಿರ್ವಹಣೆ ಮಾಡಿದ ಇನ್ಸ್ಪೆಕ್ಟರ್ ಸುರೇಶ್ ಕುಮಾರ್ ಅವರ ಬಳಿ ಅನುಭವ ಹಂಚಿಕೊಳ್ಳಲು ಮೋದಿ ಹೇಳಿದ್ದಾರೆ. ಈ ವೇಳೆ ಸುರೇಶ್, ಗರ್ವದಿಂದ ಕರ್ತವ್ಯ ನಿರ್ವಹಿಸಿದ್ದೇನೆ. ಈ ಕಾರ್ಯಕ್ರಮ ಒಂದು ದೊಡ್ಡ ಅನುಭವ ಆಗಿದೆ. ಆದರೆ ಕರ್ತವ್ಯದಲ್ಲಿದ್ದಾಗ ನನ್ನ ತಾಯಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ನಡುವೆ ತಾನು ಕರ್ತವ್ಯ ಮುಂದುವರಿಸಿದ್ದಾಗಿ ಹೇಳಿದರು. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಗಟ್ಟಿ ಮನಸು ಮಾಡಿ ಕರ್ತವ್ಯದಲ್ಲಿ ತೊಡಗಿಕೊಂಡಿದ್ದೀರಿ. ದಃಖದ ನಡುವೆ ತಮ್ಮನ್ನು ತಾವು ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದೀರಿ. ಸುರೇಶ್ಜೀ ನಿಮಗೆ ಧನ್ಯವಾದಗಳು ಎಂದು ಮೋದಿ ಹೇಳಿದರು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ