AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿಯವರ ಹೆಸರು, ದೇವೇಗೌಡರ ಪ್ರಯತ್ನ ನಿಖಿಲ್​ನನ್ನು ಗೆಲ್ಲಿಸಲಿದೆ: ಬಿಎಸ್ ಯಡಿಯೂರಪ್ಪ

ಪ್ರಧಾನಿ ಮೋದಿಯವರ ಹೆಸರು, ದೇವೇಗೌಡರ ಪ್ರಯತ್ನ ನಿಖಿಲ್​ನನ್ನು ಗೆಲ್ಲಿಸಲಿದೆ: ಬಿಎಸ್ ಯಡಿಯೂರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 11, 2024 | 2:20 PM

Share

ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕುರಿತು ಮಾಡಿರುವ ಅವಹೇಳನಕಾರಿ ಟೀಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಯಡಿಯೂರಪ್ಪ, ಯಾರೋ ಮಾಡಿದ ಕಾಮೆಂಟ್ ತಾನ್ಯಾಕೆ ಉತ್ತರಿಸಬೇಕು? ಆದರೆ ಯಾರೇ ಆಗಲಿ ಚೌಕಟ್ಟನ್ನು ಮೀರಿ ಮಾತಾಡಬಾರದು ಎಂದರು.

ಬೆಂಗಳೂರು: ಚನ್ನಪಟ್ಟಣ ತೆರಳುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಕಾಂಗ್ರೆಸ್ ಪಕ್ಷದ ಪ್ರಚಾರದ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡದೆ, ಎಲ್ಲ ಮೂರು ಉಪ ಚುನಾವಣೆಗಳಲ್ಲಿ ಎನ್​ಡಿಎ ಒಕ್ಕೂಟದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಹೇಳಿದರು. ಮೂರು ಕಡೆಯೂ ತಾನು ಹೋಗಿ ಬಂದಿದ್ದು ವಾತಾವರಣ ತಮಗೆ ಅನುಕೂಲಕರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೇಳಲಿರುವ ಸಿದ್ದರಾಮಯ್ಯ ಇಷ್ಟು ದಿನ ಯಾಕೆ ಸುಮ್ಮನಿದ್ದರು? ಯತ್ನಾಳ್