AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಾಣ ಪ್ರತಿಷ್ಠೆ ವಿಧಿವಿಧಾನ ನೆರವೇರಿದ ಬಳಿಕ ಬಾಲರಾಮನಿಗೆ ಸಾಷ್ಟಾಂಗವೆರಗಿದ ಪ್ರಧಾನಿ ನರೇಂದ್ರ ಮೋದಿ

ಪ್ರಾಣ ಪ್ರತಿಷ್ಠೆ ವಿಧಿವಿಧಾನ ನೆರವೇರಿದ ಬಳಿಕ ಬಾಲರಾಮನಿಗೆ ಸಾಷ್ಟಾಂಗವೆರಗಿದ ಪ್ರಧಾನಿ ನರೇಂದ್ರ ಮೋದಿ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on:Jan 22, 2024 | 7:29 PM

Share

ಪ್ರಧಾನಿ ಮೋದಿ ಮೊದಲು ಪವಿತ್ರಸ್ಥಳಕ್ಕೆ ತಮ್ಮ ಹಣೆ ಒತ್ತುತ್ತಾರೆ, ಅಮೇಲೆ ತಮ್ಮ ಕಣ್ಣಗಳನ್ನು ಒತ್ತುತ್ತಾರೆ. ನಮಸ್ಕರಿಸಿ ಮೇಲೆದ್ದ ಬಳಿಕ ವೈದಿಕ ಆಚಾರ್ಯರೊಬ್ಬರು ಪ್ರಧಾನಿಯವರಿಗೆ ಪ್ರಸಾದ ನೀಡುತ್ತಾರೆ. ಪ್ರಸಾದ ಸ್ವೀಕರಿಸಿದ ನಂತರ ಅವರು ತಮ್ಮ ಬಲಪಾರ್ಶ್ವದಲ್ಲಿ ಆಸೀನರಾಗಿದ್ದ ಹಿರಿಯ ವೈದಿಕ ಅಚಾರ್ಯರ ಪಾದಗಳಿಗೆ ನಮಸ್ಕರಿಸುತ್ತಾರೆ.

ಅಯೋಧ್ಯೆ: ಭಾರತೀಯರೆಲ್ಲ ಕಾತುರ ಮತ್ತು ಭಕ್ತಿಶ್ರದ್ಧೆಯಿಂದ ಕಾಯುತ್ತಿದ್ದ ಸಂದರ್ಭ ಸಾಕಾರಗೊಂಡಿದೆ. ರಾಮಮಂದಿರ ಭವ್ಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ (Ram temple consecration ritual) ನೆರವೇರಿದೆ. ಕಾರ್ಯಾಕ್ರಮದಲ್ಲಿ ಮುಖ್ಯ ಯಜಮಾನನಾಗಿ ಭಾಗವಹಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi), ಪೂಜಾ ಕೈಂಕರ್ಯಗಳು ಮತ್ತು ಮಹಾಮಂಗಳಾರತಿ ನೆರವೇರಿದ ಬಳಿಕೆ ಗರ್ಭಗುಡಿಯಲ್ಲಿ ಬಾಲರಾಮನಿಗೆ (Ram Lalla) ಪ್ರದಕ್ಷಿಣೆ ಹಾಕುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಪ್ರದಕ್ಷಿಣೆ ಬಳಿಕ ಅವರು ಬಾಲರಾಮ ವಿಗ್ರಹದ ಮುಂದೆ ಬಂದು ಭಕ್ತಿ ಮತ್ತು ಶ್ರದ್ಧೆಯಿಂದ ಸಾಷ್ಟಾಂಗ ನಮಸ್ಕಾರ ಮಾಡಿದರು. ಅವರು ದೀರ್ಘದಂಡ ನಮಸ್ಕಾರ ಮಾಡುವುದನ್ನು ಗಮನಿಸಿ. ಮೊದಲು ಪವಿತ್ರಸ್ಥಳಕ್ಕೆ ತಮ್ಮ ಹಣೆ ಒತ್ತುತ್ತಾರೆ, ಅಮೇಲೆ ತಮ್ಮ ಕಣ್ಣಗಳನ್ನು ಒತ್ತುತ್ತಾರೆ. ನಮಸ್ಕರಿಸಿ ಮೇಲೆದ್ದ ಬಳಿಕ ವೈದಿಕ ಆಚಾರ್ಯರೊಬ್ರು ಪ್ರಧಾನಿಯವರಿಗೆ ಪ್ರಸಾದ ನೀಡುತ್ತಾರೆ. ಪ್ರಸಾದ ಸ್ವೀಕರಿಸಿದ ನಂತರ ಅವರು ತಮ್ಮ ಬಲಪಾರ್ಶ್ವದಲ್ಲಿ ಆಸೀನರಾಗಿದ್ದ ಹಿರಿಯ ವೈದಿಕ ಅಚಾರ್ಯರ ಪಾದಗಳಿಗೆ ನಮಸ್ಕರಿಸುತ್ತಾರೆ. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯದ ಗವರ್ನರ್ ಆನಂದಿ ಬೆನ್ ಪಟೇಲ್ ಸಹ ಅರ್ಚಕರಿಂದ ಪ್ರಸಾದ ಸ್ವೀಕರಿಸಿವುದನ್ನು ನೋಡಬಹದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 22, 2024 02:41 PM

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.