ಆವಾಸ್ ಯೋಜನೆಯಡಿ ಹಕ್ಕುಪತ್ರ ವಿತರಿಸಿ ಮಾತಾಡುವಾಗ ಬಾಲ್ಯ ನೆನಸಿಕೊಂಡು ಭಾವುಕರಾದ ಪ್ರಧಾನಿ ಮೋದಿ

ಅರುಣ್​ ಕುಮಾರ್​ ಬೆಳ್ಳಿ

Updated on: Jan 19, 2024 | 4:53 PM

ಸಾವಿರಾರು ಜನರ ಕನಸು ನನಸಾಗಿದ್ದು ಕಂಡು ಅತೀವ ಸಮತೋಷವೆನಿಸುತ್ತಿದೆ ಎಂದು ಹೇಳಿದ ಮೋದಿ ಜನರ ಆಶೀರ್ವಾದವೇ ನನ್ನ ಬಹುದೊಡ್ಡ ಆಸ್ತಿ ಎಂದರು. ಮುಂದುವರಿದು ಮಾತಾಡಿದ ಅವರು, ಈ ಯೋಜನೆಯ ಶಿಲಾನ್ಯಾಸ ಮಾಡಲು ಬಂದಾಗ ಜನರಿಗೆ ಮನೆಗಳ ಬೀಗದ ಕೈ ಕೊಡಲು ತಾನೇ ಬರೋದಾಗಿ ನೀಡಿದ ಗ್ಯಾರಂಟಿ ಸಾಕಾರಗೊಂಡಿದೆ ಎಂದರು.

ಸೋಲಾಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಸಾರ್ವಜನಿಕ ಸಮಾರಂಭಗಳ ವೇದಿಕೆ ಮೇಲೆ ಭಾವುಕರಾಗೋದು ವಿರಳ ಸಂದರ್ಭಗಳಲ್ಲಿ ಮಾತ್ರ. ಮಹರಾಷ್ಟ್ರದ ಸೋಲಾಪುರ (Solapur) ನಗರದ ಜನ ಅಂಥ ವಿರಳ ಸಂದರ್ಭವೊಂದನ್ನು ಇವತ್ತು ವೀಕ್ಷಿಸಿದರು. ನಗರದಲ್ಲಿಂದು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ (PMAY-U Scheme) ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿ ಮಾತಾಡಿದ ಪ್ರಧಾನ ಮಂತ್ರಿ ತಮ್ಮ ಬಾಲ್ಯದ ದಿನಗಳನ್ನು ನೆನೆದು ಭಾವುಕರಾದರು. ಇಂಥ ಮನೆಗಳಲ್ಲಿ ವಾಸ ಮಾಡಬೇಕೆಂದು ತನಗೆ ಅನಿಸುತಿತ್ತು, ಅಂತ ಹೇಳಿ ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆಯಲು ನೀರು ಕುಡಿದು ಕೆಲ ಕ್ಷಣಗಳವರೆಗೆ ಮಾತಾಡದೆ, ಭಾವನೆಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದರು. ಸಾವಿರಾರು ಜನರ ಕನಸು ನನಸಾಗಿದ್ದು ಕಂಡು ಅತೀವ ಸಮತೋಷವೆನಿಸುತ್ತಿದೆ ಎಂದು ಹೇಳಿದ ಮೋದಿ ಜನರ ಆಶೀರ್ವಾದವೇ ನನ್ನ ಬಹುದೊಡ್ಡ ಆಸ್ತಿ ಎಂದರು. ಮುಂದುವರಿದು ಮಾತಾಡಿದ ಅವರು, ಈ ಯೋಜನೆಯ ಶಿಲಾನ್ಯಾಸ ಮಾಡಲು ಬಂದಾಗ ಜನರಿಗೆ ಮನೆಗಳ ಬೀಗದ ಕೈ ಕೊಡಲು ತಾನೇ ಬರೋದಾಗಿ ನೀಡಿದ ಗ್ಯಾರಂಟಿ ಸಾಕಾರಗೊಂಡಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.