ಚಿಕ್ಕಮಗಳೂರು: ಈ ಮೂರ್ಖರಿಗೆ ಇಷ್ಟು ಶಿಕ್ಷೆ ಸಾಲದು. ಮಳೆ ಸುರಿದಾಗಲೆಲ್ಲ ಚಾರ್ಮಾಡಿ ಗುಡ್ಡ ಪ್ರದೇಶದಲ್ಲಿ ಕೃತಕ ಜಲಪಾತಗಳು ಸೃಷ್ಟಿಯಾಗುತ್ತವೆ. ಅವು ನೋಡಲಷ್ಟೇ ಚಂದ ಮತ್ತು ದೂರದಿಂದ ಸೆಲ್ಫೀಗಳನ್ನು ತೆಗೆದುಕೊಂಡರೂ ಅಡ್ಡಿಯಿಲ್ಲ. ಆದರೆ ಪ್ರವಾಸಕ್ಕೆ ಬಂದಿರುವ ಯುವ ಮೂರ್ಖರು ಮೇಲಿಂದ ಕೆಳಗೆ ಸುರಿಯುತ್ತಿರುವ ನೀರಿನ ಬಳಿ ಹೋಗಿ ಜಾರುವ ಬಂಡೆಗಳ ಮೇಲೆ ನಿಂತು ಚೆಲ್ಲಾಟವಾಡುತ್ತಿದ್ದರು. ಅದನ್ನು ಗಮನಿಸಿದ ಪೊಲೀಸರು ಅವರ ಬಟ್ಟೆಗಳನ್ನು ಎತ್ತಿಕೊಂಡು ರಸ್ತೆಗೆ ಬಂದಿದ್ದಾರೆ. ಅಯ್ಯೋ ಬಟ್ಟೆ ಹೋಯ್ತಲ್ಲ ಅಂತ ಯುವಕರು ಪೊಲೀಸರ ಬಳಿ ಓಡಿ ಬಂದಿದ್ದಾರೆ. ಹಾಗೆ ಬಂದವರು ತಪ್ಪಾಯ್ತು ಸರ್, ಇನ್ಮುಂದೆ ಹಾಗೆ ಮಾಡಲ್ಲ ಅಂತ ಗೋಗರೆದು ಬಟ್ಟೆ ವಾಪಸ್ಸು ಪಡೆಯುವ ಬದಲು ಅವರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಪೊಲೀಸರೇನೋ ಬುದ್ಧಿವಾದ ಹೇಳಿ ಬಟ್ಟೆ ಮರಳಿಸಿದ್ದಾರೆ, ಅದರೆ ನಾಯಿ ಬಾಲ ಯಾವತ್ತಿಗೂ ಡೊಂಕೇ ಎನ್ನುವ ಮಾತಿಗೆ ಸಾಕ್ಷಿಯಾಗಿರುವ ಯುವಕರಿಗೆ ಬುದ್ಧಿಯಂತೂ ಬಂದಿರಲಾರದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ