ಬೆಂಗಳೂರಿನ ರಾಮೇಶ್ವರಂ ಕೆಫೆ ಬಳಿ ಪೊಲೀಸ್ ಬಿಗಿ ಬಂದೋಬಸ್ತ್​; ಎನ್​ಐಎ ತಂಡದಿಂದ ಸ್ಥಳ ಮಹಜರು

| Updated By: ಆಯೇಷಾ ಬಾನು

Updated on: Aug 05, 2024 | 9:49 AM

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಎನ್​ಐಎ ಅಧಿಕಾರಿಗಳಿಂದ ಸ್ಥಳ ಮಹಜರು ನಡೆಯುತ್ತಿದೆ. ಆರೋಪಿ ಮುಸಾವಿರ್​ನನ್ನು ಕರೆತಂದು ಎನ್​ಐಎ ಅಧಿಕಾರಿಗಳು ಸ್ಥಳ ಮಹಜರು ನಡೆಸುತ್ತಿದ್ದಾರೆ. ಭದ್ರತೆಗಾಗಿ ಸ್ಥಳೀಯವಾಗಿ ವೈಟ್ ಫೀಲ್ಡ್ ವಿಭಾಗದ 50ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ.

ಬೆಂಗಳೂರು, ಆಗಸ್ಟ್.05: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ರಾಮೇಶ್ವರಂ ಕೆಫೆಯಲ್ಲಿ ಎನ್​ಐಎ ಅಧಿಕಾರಿಗಳಿಂದ ಸ್ಥಳ ಮಹಜರು ನಡೆಯುತ್ತಿದೆ. ಆರೋಪಿ ಮುಸಾವಿರ್​ನನ್ನು ಕರೆತಂದು ಎನ್​ಐಎ ಅಧಿಕಾರಿಗಳು ಸ್ಥಳ ಮಹಜರು ನಡೆಸುತ್ತಿದ್ದಾರೆ. ಹೀಗಾಗಿ ರಾಮೇಶ್ವರಂ ಕೆಫೆ ಬಳಿ ಪೊಲೀಸ್ ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿದೆ. ಭದ್ರತೆಗಾಗಿ ಸ್ಥಳೀಯವಾಗಿ ವೈಟ್ ಫೀಲ್ಡ್ ವಿಭಾಗದ 50ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ. ಘಟನೆ ನಡೆದು ಐದು ತಿಂಗಳ ಬಳಿಕ ಆರೋಪಿ ಕರೆತಂದು ಮಹಜರು ನಡೆಸಲಾಗುತ್ತಿದೆ.

NIA ಅಧಿಕಾರಿಗಳು 2-3 ಬಾರಿ ದೃಶ್ಯ ಮರು ಸೃಷ್ಟಿ ಮಾಡ್ತಿದ್ದಾರೆ. ಆರೋಪಿ ಮುಸಾವಿರ್, 3 ಬಾರಿ ನಡೆದುಕೊಂಡು ಬಂದು ಯಾವ ರೀತಿ ಕೃತ್ಯ ಎಸಗಲಾಗಿತ್ತು ಎಂದು ತೋರಿಸಿದ್ದಾನೆ. ಕ್ಯಾಪ್, ಕನ್ನಡಕ, ಬ್ಯಾಗ್ ಹಾಕಿಕೊಂಡು ಅವತ್ತು ಹೇಗೆ ಬಂದಿದ್ದ ಅದೇ ರೀತಿ ನಡೆದುಕೊಂಡು ಬಂದು ತೋರಿಸಿ ಅಧಿಕಾರಿಗಳಿಗೆ ವಿವರಣೆ ನೀಡಿದ್ದಾನೆ. ರಾಮೇಶ್ವರಂ ಕೆಫೆಗೆ ಹೇಗೆ ಬಂದಿದ್ದ ಆ ರೀತಿ ದೃಶ್ಯ ಮರುಸೃಷ್ಟಿ ಮಾಡಲಾಗಿದೆ. ಬಾಂಬ್ ಇಟ್ಟಿದ್ದ ಸ್ಥಳ, ಕುಳಿತಿದ್ದ ಸ್ಥಳ ತೋರಿಸಿದ್ದಾನೆ. ಈ ಎಲ್ಲವನ್ನೂ ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡ್ತಿದ್ದಾರೆ. ಅವತ್ತಿನ ರೀತಿ ಬ್ಲ್ಯಾಕ್ ಬ್ಯಾಗ್, ಟೋಪಿ ಹಾಕಿಸಿ ಸ್ಥಳ‌ ಮಹಜರು ಮಾಡಲಾಗುತ್ತಿದೆ.

ರಾಷ್ಟ್ರೀಯ ತನಿಖಾ ದಳ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ. ಮಾ.1ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಏಪ್ರಿಲ್​​ 12ರಂದು ಪ್ರಮುಖ ಆರೋಪಿಗಳನ್ನು NIA ಬಂಧಿಸಿತ್ತು. ಅಬ್ದುಲ್​ ಮತೀನ್​, ಮುಸಾವಿರ್ ಹುಸೇನ್ ಬಂಧತ ಆರೋಪಿಗಳು.

ವರದಿ: ಪ್ರದೀಪ್, ಟಿವಿ9

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:54 am, Mon, 5 August 24

Follow us on