ಶಾಸಕರ ಭವನದ ಮುಂದೆ ಪಾರ್ಕ್​ ಆಗಿದ್ದ ಶಿವಲಿಂಗೇಗೌಡರ ಕಾರಿಗೆ ಗುದ್ದಿದ ಪೊಲೀಸ್ ಜೀಪ್, ಮುಂಭಾಗದ ಡೋರ್ ಜಖಂ

Updated on: Feb 25, 2025 | 1:40 PM

ತಮ್ಮ ಕಾರಿಗೆ ಪೊಲೀಸ್ ಜೀಪು ಗುದ್ದಿದ ಬಳಿಕ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಪ್ರತಿಕ್ರಿಯೆ ಇನ್ನೂ ನೀಡಿಲ್ಲ, ಪಾಪ ಏನಂತ ಹೇಳಿಕೆ ನೀಡಿಯಾರು? ಅಚಾತುರ್ಯವಂತೂ ನಡೆದು ಹೋಗಿದೆ, ಪೊಲೀಸ್ ಇಲಾಖೆಯವರು ಅದನ್ನು ರಿಪೇರಿ ಮಾಡಿಸಿಕೊಡುತ್ತಾರೆ ಮತ್ತು ಮಾರ್ಕ್​ಗಳೇನಾದರೂ ಅಗಿದ್ದರೆ ತೆಗೆಸುತ್ತಾರೆ. ಶಾಸಕರು ಇವತ್ತೇ ಅರಸೀಕೆರೆಗೇನಾದರೂ ವಾಪಸ್ಸು ಹೋಗಬೇಕು ಅಂದುಕೊಂಡಿದ್ದರೆ ಪ್ರಯಾಣವನ್ನು ಮುಂದೂಡದೆ ವಿಧಿಯಿಲ್ಲ.

ಬೆಂಗಳೂರು: ಮೊನ್ನೆ ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ ಅವರು 4 ಬಾರಿ ಶಾಸಕನಾಗಿರುವ ತನಗೆ ಮಂತ್ರಿಯಾಗುವ ಮಹದಾಸೆ ಇದೆ ಅಂತ ಹೇಳಿದ್ದನ್ನು ನಗರದ ಪೊಲೀಸರು ಬಹಳ ಗಂಭೀರವಾಗಿ ಪರಿಗಣಿಸಿದಂತಿದೆ! ಮಂತ್ರಿಯಾಗಲಿರುವ ಗೌಡರಿಗೆ ಶಾಸಕರಾಗಿ ಉಪಯೋಗಿಸುತ್ತಿರುವ ಕಾರು ಯಾತಕ್ಕೆ ಬೇಕು? ಇದರಿಂದ ಏನು ಪ್ರಯೋಜನ ಅಂತ ಅಂದುಕೊಂಡಿರುವ ಪೊಲೀಸ್ ಜೀಪಿನ ಚಾಲಕರೊಬ್ಬರು ಶಾಸಕರ ಭವನದ ಮುಂದೆ ನಿಂತಿದ್ದ ಗೌಡರ ಕಾರಿಗೆ ಧಡಾರನೆ ಗುದ್ದಿದ್ದಾರೆ! ನಾವು ಹೇಳಿದ್ದು ತಮಾಷೆಗೆ ಮಾರಾಯ್ರೇ, ನೀವು ಅದನ್ನು ಗಂಭೀರವಾಗಿ ಪರಿಗಣಿಸಬೇಡಿ!! ಕಾರಿನ ಫ್ರಂಟ್ ಡೋರ್ ಜಖಂಗೊಂಡಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ, ಮಿನಿಸ್ಟ್ರಾಗುವ ಆಸೆ ಖಂಡಿತ ಇದೆ: ಕೆಎಂ ಶಿವಲಿಂಗೇಗೌಡ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More