ರಾಜಕೀಯ ಪ್ರಕ್ರಿಯೆಗಳನ್ನು ಕುಮಾರಸ್ವಾಮಿ ಷಡ್ಯಂತ್ರ ಅಂತ ಹೇಳಬಾರದು: ಡಿಕೆ ಸುರೇಶ್

ರಾಜಕೀಯ ಪ್ರಕ್ರಿಯೆಗಳನ್ನು ಕುಮಾರಸ್ವಾಮಿ ಷಡ್ಯಂತ್ರ ಅಂತ ಹೇಳಬಾರದು: ಡಿಕೆ ಸುರೇಶ್
|

Updated on: Oct 26, 2024 | 4:26 PM

ಡಿಕೆ ಶಿವಕುಮಾರ್ ಮೊದಲೇ ಹೇಳಿದಂತೆ ಅವರ ಹೆಸರಲ್ಲೇ ಚುನಾವಣೆ ನಡೆಯುತ್ತಿದೆ, ಯಾರೇ ಸ್ಪರ್ಧಿಸಿದರೂ ನನ್ನ ಮುಖ ನೋಡಿ ಮತ ಹಾಕಬೇಕು ಅಂತ ಹೇಳಿದ್ದರು, ಇಲ್ಲಿ ಯೋಗೇಶ್ವರ್ ಸ್ಪರ್ಧೆ ಮಾಡುತ್ತಿದ್ದರೂ ಕಾಂಗ್ರೆಸ್ ಶಿವಕುಮಾರ್ ಹೆಸರಲ್ಲಿ ಮತ ಯಾಚಿಸಲಾಗುತ್ತಿದೆ ಎಂದು ಸುರೇಶ್ ಹೇಳಿದರು.

ರಾಮನಗರ: ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಪರ ಪ್ರಚಾರ ಮಾಡುತ್ತ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಡಿಕೆ ಸುರೇಶ್, ರಾಜಕೀಯ ಪ್ರಕ್ರಿಯೆಗಳನ್ನು ಷಡ್ಯಂತ್ರ ಅಂತ ಕುಮಾರಸ್ವಾಮಿ ಹೇಳಬಾರದು, ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಬೇಕೆಂದುಕೊಂಡಿದ್ದರು, ಅದರಲ್ಲಿ ಯಶ ಕಂಡಿದ್ದಾರೆ, ಅವರ ಹೋರಾಟ ಅವರಿಗೆ ನಮ್ಮ ಹೋರಾಟ ನಮಗೆ ಎಂದು ಹೇಳಿದರು. ಯೋಗೇಶ್ವರ್ ಕಾಂಗ್ರೆಸ್ ಸೇರಿ ಸ್ಪರ್ಧಿಸುತ್ತಿರುವುದಕ್ಕೆ ಕಾರ್ಯಕರ್ತರಲ್ಲಿ ಅಸಮಾಧಾನವೇನೂ ಇಲ್ಲ, ಎಲ್ಲರೂ ಒಗ್ಗಟ್ಟಿನಿಂದ ದುಡಿಯುತ್ತಿದ್ದಾರೆ ಎಂದು ಸುರೇಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸರ್ಕಾರ ಅಸ್ಥಿರಗೊಳಿಸಲು ಇಡಿ, ಐಟಿ, ಸಿಬಿಐ ಬಳಕೆ: ಕೇಂದ್ರದ ವಿರುದ್ಧ ಡಿಕೆ ಸುರೇಶ್ ವಾಗ್ದಾಳಿ

Follow us