ಪುನೀತ್ ಸರ್ ಒಬ್ಬ ಕಲಾವಿದನಿಗಿಂತ ಹೆಚ್ಚು ಶ್ರೇಷ್ಠ ವ್ಯಕ್ತಿಯಾಗಿದ್ದರು, ಅವರಂಥವರು ನಮಗೆ ಪುನಃ ಸಿಗಲಾರರು: ಮಂಗ್ಲಿ

ಒಬ್ಬ ಕಲಾವಿದನಿಗಿಂತ ಜಾಸ್ತಿ ಅವರು ಶ್ರೇಷ್ಠ ವ್ಯಕ್ತಿಯಾಗಿದ್ದರು. ಅವರೆಲ್ಲೇ ಇರಲಿ, ಅವರ ಆತ್ಮಕ್ಕೆ ಶಾಂತಿ ಸಿಕ್ಕಲಿ ಎಂದು ಮಂಗ್ಲಿ ಹೇಳಿದರು.

ಪುನೀತ್ ಸರ್ ಒಬ್ಬ ಕಲಾವಿದನಿಗಿಂತ ಹೆಚ್ಚು ಶ್ರೇಷ್ಠ ವ್ಯಕ್ತಿಯಾಗಿದ್ದರು, ಅವರಂಥವರು ನಮಗೆ ಪುನಃ ಸಿಗಲಾರರು: ಮಂಗ್ಲಿ
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 13, 2021 | 9:32 PM

ಮಂಗ್ಲಿ ತೆಲುಗು ಸಿನಿಮಾ ಇಂಡಸ್ಟ್ರೀಯಲ್ಲಿ ದೊಡ್ಡ ಹೆಸರು. ಅವರ ಹಾಡುಗಳಿಗೆ ಜನ ಫಿದಾ ಆಗುತ್ತಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ಮಂಗ್ಲಿ ಅವರು ಹಾಡಿದ ಕಣ್ಣೇ ಅದುರಿಂದೆ… ಹಾಡನ್ನು ದಕ್ಷಿಣ ಭಾರತದಲ್ಲಿ ಕೇಳದವರೇ ಇರಲಿಕ್ಕಿಲ್ಲ. ನಿಸ್ಸಂದೇಹವಾಗಿ ಸುಶ್ರಾವ್ಯ ಕಂಠಸಿರಿಯ ಒಡತಿ ಮಂಗ್ಲಿ. ಯಾವುದೋ ಕೆಸಲದ ನಿಮಿತ್ತ ಶನಿವಾರ ಅವರು ಬೆಂಗಳೂರಿಗೆ ಆಗಮಿಸಿದ್ದರು. ವೇದಿಕೆ ಮೇಲೆ ಪುನೀತ್ ರಾಜಕುಮಾರ್ ಅವರ ಬಗ್ಗೆ ಭಾವುಕರಾಗಿ ಮಾತಾಡಿದ ನಂತರ ಅವರು ಟಿವಿ9 ಸಿನಿಮಾ ವರದಿಗಾರ ಮಾಲ್ತೇಶ್ ಜಗ್ಗಿನ್ ಜೊತೆ ಒಂದು ಚಿಕ್ಕ ಮಾತಕತೆ ನಡೆಸಿದರು. ಮಂಗ್ಲಿಗೆ ಕನ್ನಡ ಬರುವುದಿಲ್ಲವಾದ್ದರಿಂದ ಜಗ್ಗಿನ್ ಇಂಗ್ಲಿಷ್ ಭಾಷೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ತೆಲುಗಿನಲ್ಲಿ ಉತ್ತರಿಸಿದರು.

ಪುನೀತ್ ಬಹಳ ದೊಡ್ಡ ಸ್ಟಾರ್ ಅವರ ಕುರಿತು ಮಾತಾಡುವ ಯೋಗ್ಯತೆ ತನಗಿಲ್ಲ ಅಂತ ಮಾತು ಆರಂಭಿಸಿದ ಮಂಗ್ಲಿ, ಪುನೀತ್ ಅವರನ್ನು ಜನರೆಲ್ಲ ಅಪ್ಪು ಅಂತ ಕರೆಯೋದು ಗೊತ್ತಿರಲಿಲ್ಲ, ತನಗೆ ಪುನೀತ್ ರಾಜಕುಮಾರ ಅಂತ ಮಾತ್ರ ಗೊತ್ತು. ತೆಲುಗಿಗೆ ಡಬ್ ಆದ ಅವರ ಚಿತ್ರಗಳನ್ನು ನೋಡಿದ್ದಾಗಿ ಹೇಳಿದ ಅವರು, ಪುನೀತ್ ಒಬ್ಬ ಗುಣವಂತರಾಗಿದ್ದರು. ಮೇರು ವ್ಯಕ್ತಿತ್ವ ಅವರದ್ದು, ಅವರಂಥ ವ್ಯಕ್ತಿಯನ್ನು ಪುನಃ ನೋಡಲಾಗದು.

ಒಬ್ಬ ಕಲಾವಿದನಿಗಿಂತ ಜಾಸ್ತಿ ಅವರು ಶ್ರೇಷ್ಠ ವ್ಯಕ್ತಿಯಾಗಿದ್ದರು. ಅವರೆಲ್ಲೇ ಇರಲಿ, ಅವರ ಆತ್ಮಕ್ಕೆ ಶಾಂತಿ ಸಿಕ್ಕಲಿ ಎಂದು ಮಂಗ್ಲಿ ಹೇಳಿದರು.

ಅವರ ನಿಧನದ ವಾರ್ತೆ ಸಿಕ್ಕಾಗ ತಾನು ಹಾಡಿನ ರೆಕಾರ್ಡಿಂಗ್ನಲ್ಲಿದ್ದೆ, ಸುದ್ದಿ ಕಿವಿಗೆ ಬಿದ್ದಾಕ್ಷಣ ಶಾಕ್ ಆಯಿತು, ಮೊದಲಿಗೆ ಅದನ್ನು ನಂಬಲಾಗಲಿಲ್ಲ. ಆದರೆ, ಟಿವಿ9 ನಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಿದ್ದು ನೋಡಿದ ನಂತರ ಇದು ನಂಬಲಾಗದ ಸತ್ಯ ಅನ್ನೋದು ಮನವರಿಕೆ ಆಯಿತು ಎಂದು ಮಂಗ್ಲಿ ಹೇಳಿದರು.

Follow us
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ