‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ
ರಾಘವೇಂದ್ರ ಹೆಗಡೆ ಹಾಗೂ ಧ್ರುವ ಸರ್ಜಾ ಮಧ್ಯೆ ಕಿತ್ತಾಟ ಶುರುವಾಗಿದೆ. ‘ದಿ ಸೋಲ್ಜರ್’ ಸಿನಿಮಾ ಮಾಡುವ ವಿಚಾರದಲ್ಲಿ ಇಬ್ಬರೂ ಒಮ್ಮತದ ನಿರ್ಧಾರಕ್ಕೆ ಬರೋಕೆ ಆಗಿಲ್ಲ. ಹೀಗಿರುವಾಗಲೇ ಧ್ರುವ ಬಗ್ಗೆ ರಾಘವೇಂದ್ರ ಅವರು ಹೊಸ ಆರೋಪವನ್ನು ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
‘ಧ್ರುವ ಸರ್ಜ ಕಡೆಯಿಂದ ವಂಚನೆ ಆಗಿದೆ’ ಎಂದು ರಾಘವೇಂದ್ರ ಹೆಗ್ಡೆ (Raghavendra Hegde) ಆರೋಪ ಮಾಡಿದ್ದರು. ಈ ಆರೋಪದ ಬೆನ್ನಲ್ಲೇ ಧ್ರುವ ಸರ್ಜಾ ಟೀಂ ಇದನ್ನು ಸುಳ್ಳು ಎಂದು ಕರೆದಿತ್ತು. ‘ನಮ್ಮದೇನು ತಪ್ಪಿಲ್ಲ. ರಾಘವೇಂದ್ರ ಕಡೆಯಿಂದಲೇ ವಿಳಂಬ ಆಗುತ್ತಿದೆ. ಅವರು ಕನ್ನಡದಲ್ಲಿ ಸಿನಿಮಾ ಮಾಡಲು ಆಸಕ್ತಿ ತೋರಿಸುತ್ತಿಲ್ಲ’ ಎಂದಿದ್ದರು. ಈ ಬೆನ್ನಲ್ಲೇ ರಾಘವೇಂದ್ರ ಸ್ಪಷ್ಟನೆ ಕೊಟ್ಟಿದ್ದಾರೆ. ‘ಧ್ರುವ ಕಡೆಯಿಂದ ನನಗೆ 8 ವರ್ಷ ವ್ಯರ್ಥವಾಗಿದೆ. ನಾನು ಕನ್ನಡದಲ್ಲೇ ಸಿನಿಮಾ ಮಾಡಲು ಆಸಕ್ತಿ ತೋರಿಸಿದ್ದೆ. ಅವರೇ ಪ್ಯಾನ್ ಇಂಡಿಯಾ ಮಾಡೋಣ ಎಂದು ಒತ್ತಾಯಿಸಿದ್ದು’ ಎಂದು ಅವರು ಪ್ರತ್ಯಾರೋಪ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us