AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಪ್ರಿಲ್ 5ರಂದು ಕೋಲಾರದಿಂದಲೇ ಕಾಂಗ್ರೆಸ್ ಪಕ್ಷದ ಸತ್ಯಮೇವ ಜಯತೆ ಆಂದೋಲನಕ್ಕೆ ರಾಹುಲ್ ಗಾಂಧಿಯಿಂದ ಚಾಲನೆ: ಎಮ್ ಆರ್ ಸೀತಾರಾಮ್

ಏಪ್ರಿಲ್ 5ರಂದು ಕೋಲಾರದಿಂದಲೇ ಕಾಂಗ್ರೆಸ್ ಪಕ್ಷದ ಸತ್ಯಮೇವ ಜಯತೆ ಆಂದೋಲನಕ್ಕೆ ರಾಹುಲ್ ಗಾಂಧಿಯಿಂದ ಚಾಲನೆ: ಎಮ್ ಆರ್ ಸೀತಾರಾಮ್

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 30, 2023 | 6:40 PM

Share

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸೀತಾರಾಮ್ ಸತ್ಯಮೇವ ಜಯತೆ ಸಮಾವೇಶಕ್ಕೆ ಸುಮಾರು ಒಂದೂವರೆ ಲಕ್ಷ ಜನ ಸೇರಲಿದ್ದಾರೆ, ಸಿದ್ಧತೆಗಳನ್ನು ನೋಡಲು ತಾವು ಆಗಮಿಸಿದ್ದಾಗಿ ಹೇಳಿದರು.

ಕೋಲಾರ: 2019 ರ ಸಾರ್ವತ್ರಿಕ ಚುನಾವಣೆ ವೇಳೆ ಕೋಲಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ಮನೆತನದ ಬಗ್ಗೆ ಮಾತಾಡಿದ್ದಕ್ಕೆ ಸೂರತ್ ಕೋರ್ಟೊಂದರಿಂದ 2 ವರ್ಷ ಜೈಲು ಶಿಕ್ಷೆಗೊಳಗಾಗಿ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಏಪ್ರಿಲ್ 5 ರಂದು ಇಲ್ಲಿಂದಲೇ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಸತ್ಯಮೇವ ಜಯತೆ ಆಂದೋಲನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಕಾಂಗ್ರೆಸ್ ಧುರೀಣ ಎಮ್ ಆರ್ ಸೀತಾರಾಮ್ (MR Seetharam) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಸತ್ಯಮೇವ ಜಯತೆ ಸಮಾವೇಶಕ್ಕೆ ಸುಮಾರು ಒಂದೂವರೆ ಲಕ್ಷ ಜನ ಸೇರಲಿದ್ದಾರೆ, ಸಿದ್ಧತೆಗಳನ್ನು ನೋಡಲು ತಾವು ಆಗಮಿಸಿದ್ದಾಗಿ ಸೀತಾರಾಮ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ