Lalit Modi: ಯುಕೆನಲ್ಲಿ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸುವುದಾಗಿ ಬೆದರಿಕೆಯೊಡ್ಡಿದ ಲಲಿತ್ ಮೋದಿ

ಯಾವ ಆಧಾರದ ಮೇಲೆ ರಾಹುಲ್ ಗಾಂಧಿ ನನ್ನನ್ನು ನ್ಯಾಯ ವ್ಯವಸ್ಥೆಯಿಂದ ತಪ್ಪಿಸಿಕೊಂಡು ಪರಾರಿಯಾದವ ಎಂದು ಕರೆಯುತ್ತಾರೆ? ನಾನು ಎಂದಿಗೂ ಯಾವುದೇ ಅಪರಾಧಕ್ಕೆ ಶಿಕ್ಷೆಗೊಳಗಾಗಿಲ್ಲ. ನಾನು 100 ಶತಕೋಟಿ ಡಾಲರ್‌ಗಳಷ್ಟು ಹಣವನ್ನು ಗಳಿಸಿದ ವಿಶ್ವದ ಶ್ರೇಷ್ಠ ಕ್ರೀಡಾಕೂಟವನ್ನು ಮಾಡಿದ್ದೇನೆ.

Lalit Modi: ಯುಕೆನಲ್ಲಿ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸುವುದಾಗಿ ಬೆದರಿಕೆಯೊಡ್ಡಿದ ಲಲಿತ್ ಮೋದಿ
ಲಲಿತ್ ಮೋದಿ
Follow us
|

Updated on:Mar 30, 2023 | 1:35 PM

ದೆಹಲಿ: ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಹೇಳಿಕೆಗಳಿಗೆ ಸಂಬಂದಿಸಿದಂತೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮಾಜಿ ಮುಖ್ಯಸ್ಥ ಲಲಿತ್ ಮೋದಿ (Lalit Modi), ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ (Rahul Gandhi) ವಿರುದ್ಧ ಯುಕೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ಐಪಿಎಲ್‌ನಲ್ಲಿ ಹಣಕಾಸು ಅವ್ಯವಹಾರದ ಆರೋಪಗಳನ್ನು ಎದುರಿಸಿದ ನಂತರ 2010 ರಿಂದ ಲಂಡನ್‌ನಲ್ಲಿ ವಾಸಿಸುತ್ತಿರುವ ಮೋದಿ ಗುರುವಾರ ರಾಹುಲ್ ಗಾಂಧಿ ವಿರುದ್ಧ ಟ್ವಿಟರ್​​ನಲ್ಲಿ ಗುಡುಗಿದ್ದಾರೆ. ರಾಹುಲ್ ಗಾಂಧಿಯೇ ಸ್ವತಃ ಮೂರ್ಖನಾಗುವುದನ್ನು ನೋಡಲು ನಾನು ಬಯಸುತ್ತೇನೆ ಎಂದು ಲಲಿತ್ ಮೋದಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಮೋದಿ ಸರ್​​ನೇಮ್ ಇರುವವರಿಗೆ ಅವಮಾನ ಮಾಡಲಾಗಿದೆ ಎಂದು ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ ನಂತರ ರಾಹುಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಲಲತ್ ಮೋದಿ ನಿರ್ಧರಿಸಿದ್ದಾರೆ. 2019 ರ ಚುನಾವಣಾ ರ್ಯಾಲಿಯಲ್ಲಿ ಎಲ್ಲ ಕಳ್ಳರ ಸರ್​​ನೇಮ್ ಮೋದಿ ಅಂತ ಯಾಕಿದೆ? ಎಂದು ಕೇಳಿದ ರಾಹುಲ್ ಪ್ರಧಾನಿ ಮೋದಿಯನ್ನು ಲಲಿತ್ ಮೋದಿ ಮತ್ತು ಪರಾರಿಯಾದ ವಜ್ರ ವ್ಯಾಪಾರಿ ನೀರವ್ ಮೋದಿಯೊಂದಿಗೆ ಹೋಲಿಸಿದ್ದರು. ರಾಹುಲ್ ಗಾಂಧಿಯ ಈ ಹೇಳಿಕೆಗೆ ಸಂಬಂಧಿಸಿಂತೆ ನ್ಯಾಯಾಲಯ ವಿಧಿಸಿದ ಶಿಕ್ಷೆಯಿಂದಾಗಿ ಅವರು ಸಂಸತ್​​ ನಿಂದ ಅನರ್ಹಗೊಂಡರು.

ಇದನ್ನೂ ಓದಿAmit Shah: ಅಂದು ಮೋದಿ ಹೆಸರು ಹೇಳುವಂತೆ ಸಿಬಿಐ ಅಧಿಕಾರಿಗಳು ನನ್ನ ಮೇಲೆ ಒತ್ತಡ ಹಾಕಿದ್ದರು: ಅಮಿತ್ ಶಾ

ಯಾವ ಆಧಾರದ ಮೇಲೆ ರಾಹುಲ್ ಗಾಂಧಿ ನನ್ನನ್ನು ನ್ಯಾಯ ವ್ಯವಸ್ಥೆಯಿಂದ ತಪ್ಪಿಸಿಕೊಂಡು ಪರಾರಿಯಾದವ ಎಂದು ಕರೆಯುತ್ತಾರೆ? ನಾನು ಎಂದಿಗೂ ಯಾವುದೇ ಅಪರಾಧಕ್ಕೆ ಶಿಕ್ಷೆಗೊಳಗಾಗಿಲ್ಲ. ನಾನು 100 ಶತಕೋಟಿ ಡಾಲರ್‌ಗಳಷ್ಟು ಹಣವನ್ನು ಗಳಿಸಿದ ವಿಶ್ವದ ಶ್ರೇಷ್ಠ ಕ್ರೀಡಾಕೂಟವನ್ನು ಮಾಡಿದ್ದೇನೆ. ರಾಹುಲ್ ಗಾಂಧಿ ಕುಟುಂಬಕ್ಕಿಂತ ನನ್ನ ಕುಟುಂಬ ಭಾರತಕ್ಕಾಗಿ ಹೆಚ್ಚಿನದನ್ನು ಮಾಡಿದೆ. ನನ್ನ ಮೇಲೆ ನೀವು ಮಾಡಿರುವ ಆರೋ ಆರೋಪಗಳನ್ನು ಸಾಬೀತುಪಡಿಸಿ. ನೀವು ನ್ಯಾಯಾಲಯದಲ್ಲಿ ಸಂಪೂರ್ಣವಾಗಿ ಮೂರ್ಖರಾಗುವುದನ್ನು ನೋಡಲು ಎದುರು ನೋಡುತ್ತಿದ್ದೇನೆ ಎಂದು ಲಲಿತ್ ಮೋದಿ ಸರಣಿ ಟ್ವೀಟ್​ನಲ್ಲಿ ಹೇಳಿದ್ದಾರೆ.

ಪ್ರತಿ ಟಾಮ್ ಡಿಕ್ ಮತ್ತು ಗಾಂಧಿ ಸಹವರ್ತಿಗಳು ನನ್ನನ್ನು ಮತ್ತೆ ಮತ್ತೆ ಪರಾರಿಯಾದವ ಎಂದು ಹೇಳುವುದನ್ನು ನಾನು ನೋಡುತ್ತಿದ್ದೇನೆ. ಯಾಕೆ? ಪಪ್ಪು ಅಕಾ  ರಾಹುಲ್ ಗಾಂಧಿಯಲ್ಲದೆ  ಈಗ ಒಬ್ಬ ಸಾಮಾನ್ಯ ನಾಗರಿಕನು ಅದನ್ನು ಹೇಳುತ್ತಾನೆ ಮತ್ತು ಎಲ್ಲಾ ವಿರೋಧ ಪಕ್ಷದ ನಾಯಕರಿಗೆ ಬೇರೆ ಏನೂ ಮಾಡಲು ಸಾಧ್ಯವಿಲ್ಲ ಎಂದು ತೋರುತ್ತದೆ, ಆದ್ದರಿಂದ ಅವರೂ ಸಹ ಮಾಹಿತಿಯಿಲ್ಲದವರಾಗಿದ್ದಾರೆ ಅಥವಾ ದ್ವೇಷಕ್ಕೆ ಗುರಿಯಾಗುತ್ತಾರೆ. ನಾನು ರಾಹುಲ್ ಗಾಂಧಿ ವಿರುದ್ಧ ಯುಕೆ ನ್ಯಾಯಾಲಯದಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದೇನೆ.

ಅವರು ಕೆಲವು ದೃಢವಾದ ಪುರಾವೆಗಳೊಂದಿಗೆ ಬರಬೇಕಾಗುತ್ತದೆ ಎಂದು ನನಗೆ ಖಾತ್ರಿಯಿದೆ. ಅವರು ಸ್ವತಃ ಮೂರ್ಖರಾಗುವುದನ್ನು ನೋಡಲು ನಾನು ಬಯಸುತ್ತೇನೆ. ಆರ್.ಕೆ. ವರ್ಧನ್, ಸೀತಾರಾಮ್ ಕೇಸರಿ,ಮೋತಿ ಲಾಲ್ ವೊಹ್ರಾ, ಸತೀಶ್ ಶರ್ಮಾ ಎಲ್ಲರೂ ಗಾಂದಿ ಕುಟುಂಬದ ರಾಜಕೀಯ ನಿಧಿ ಸಂಗ್ರಹಕರಾಗಿದ್ದರು. ನರಾಯಿನ್ ದತ್ತ್ ತಿವಾರಿಯನ್ನು ಮರೆಯುವಂತಿಲ್ಲ. ನೀವೆಲ್ಲರೂ ಹೇಗೆ ಸಾಗರೋತ್ತರ ಆಸ್ತಿಗಳನ್ನು ಹೊಂದಿದ್ದೀರಿ ಎಂದು ಕಮಲ್ ನಾಥ್ ಅವರಲ್ಲಿ ಕೇಳಿ. ನಾನು ವಿಳಾಸ ಮತ್ತು ಮತ್ತು ಫೋಟೋಗಳನ್ನು ಕಳುಹಿಸುವೆ. ನಿಜವಾದ ಮೋಸಗಾರರು ಯಾರು ಎಂಬುದು ಗೊತ್ತಿರುವಾಗ ದೇಶದ ಜನರನ್ನು ಮೋಸ ಮಾಡಬೇಡಿ. ಅವರೇ ದೇಶವನ್ನು ಆಳುವವರು ಎಂದು ಗಾಂಧಿ ಕುಟುಂಬ ಮಾಡಿಕೊಂಡಿತ್ತು. ಹೌದು ನೀವು ಕಠಿಣ ಹೊಣೆಗಾರಿಕೆಯ ಕಾನೂನುಗಳನ್ನು ಜಾರಿಗೆ ತಂದ ತಕ್ಷಣ ನಾನು ಹಿಂತಿರುಗುತ್ತೇನೆ.

ಕಳೆದ 15 ವರ್ಷಗಳಲ್ಲಿ ನಾನು ತೆಗೆದುಕೊಂಡ ಒಂದು ಪೈಸೆಯೂ ಸಾಬೀತಾಗಿಲ್ಲ. ಆದರೆ 100 ಶತಕೋಟಿ ಡಾಲರ್‌ಗಳಷ್ಟು ಹಣವನ್ನು ಗಳಿಸಿದ ಈ ಜಗತ್ತಿ ಶ್ರೇಷ್ಠ ಕ್ರೀಡಾಕೂಟವನ್ನು ನಾನು ಮಾಡಿದ್ದೇನೆ ಎಂಬುದು ಸ್ಪಷ್ಟವಾಗಿ ಸಾಬೀತಾಗಿದೆ. 1950 ರ ದಶಕದ ಆರಂಭದಿಂದ ನನ್ನ ಮೋದಿ-ಕುಟುಂಬ ನಮ್ಮ ದೇಶಕ್ಕಾಗಿ ಹೆಚ್ಚಿನದನ್ನು ಮಾಡಿದೆ ಎಂಬುದನ್ನು ಒಬ್ಬ ಕಾಂಗ್ರೆಸ್ ನಾಯಕರು ಮರೆಯಬಾರದು. ನಾನು ಕೂಡ ಹೆಚ್ಚು ಮಾಡಿದ್ದೇನೆ ಅದಕ್ಕಿಂತ ಹೆಚ್ಚಾಗಿ ಮಾಡುವ ಕನಸು ಕಾಣುತ್ತೇನೆ. ಆದ್ದರಿಂದ ಸ್ವಂತ ಗಾಂಧಿ ಕುಟುಂಬದವರಂತೆ ಭಾರತದ ಹಗರಣದ ಕಳಂಕಿತ ಲೂಟಿಕೋರರೇ ಬೊಗಳುತ್ತಲೇ ಇರಿ ಎಂದು ಲಲಿತ್ ಮೋದಿ ಕಿಡಿ ಕಾರಿದ್ದಾರೆ.

ಮೋದಿಯವರ ಟ್ವೀಟ್‌ಗಳಿಗೆ ಅಥವಾ ಅವರ ಕಾನೂನು ಬೆದರಿಕೆಗೆ ರಾಹು ಗಾಂಧಿ ಇದುವರೆಗೆ ಪ್ರತಿಕ್ರಿಯಿಸಿಲ್ಲ. ಅವರ ಅಪರಾಧವು ರಾಜಕೀಯ ಪ್ರೇರಿತವಾಗಿದೆ ಮತ್ತು ಅದರ ವಿರುದ್ಧ ಅವರು ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:01 pm, Thu, 30 March 23

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ