ಬೆಂಗಳೂರಲ್ಲಿ ಪುನಃ ಬೆಳ್ಳಂಬೆಳಗ್ಗೆಯೇ ಸುರಿಯಲಾರಂಭಿಸಿದ ಮಳೆ, ಆಫೀಸುಗಳಿಗೆ ಹೊಗೋರು ಕಂಗಾಲು

ಅರುಣ್​ ಕುಮಾರ್​ ಬೆಳ್ಳಿ

Updated on: May 20, 2025 | 10:12 AM

ರವಿವಾರದವರೆಗೆ ಬೆಂಗಳೂರು, ನಗರದ ಸುತ್ತಮುತ್ತಲ ಪ್ರದೇಶ ಮತ್ತು ರಾಜ್ಯದ ಆರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಚೇರಿಗಳ ಟೈಮು ನಿಗದಿಯಾಗಿರುವಂತೆ ಪರಮಾತ್ಮ ಮಳೆಗೂ ಸಮಯ ನಿಗದಿ ಮಾಡಿದ್ದರೆ ಚೆನ್ನಾಗಿತ್ತು. ಮಳೆ ಸುರಿಯುವ ಸಮಯ ನೋಡಿ ಜನ ಕೆಲಸಗಳನ್ನು ಶೆಡ್ಯೂಲ್ ಮಾಡಿಕೊಳ್ಳಬಹುದಿತ್ತು.

ಬೆಂಗಳೂರು, ಮೇ 20: ಆಗಸಕ್ಕೆ ಯಾರಾದರೂ ಕೊಡೆ ಹಿಡಿಯಬಾರದೇ? ಬೆಂಗಳೂರಿನ ಜನ ಆಡಿಕೊಳ್ಳುತ್ತಿರುವ ಮಾತಿದು. ಅದರಲ್ಲೂ ಕೆಲಸಕ್ಕೆ ಅಂತ ಕಚೇರಿಗಳಿಗೆ ಹೋಗುವವರು ಇಂದು ಬೆಳ್ಳಂಬೆಳಗ್ಗೆಯೇ ಸುರಿಯಲು ಶುರುವಾದ ಮಳೆಗೆ ಹಿಡಿಶಾಪ ಹಾಕುತ್ತಿದ್ದಾರೆ. ನಗರದ ಅತ್ಯಂತ ಬ್ಯೂಸಿ ಬಸ್​ಸ್ಟಾಪ್​ಗಳಲ್ಲಿ ಒಂದಾಗಿರುವ ಕಾಪೋರೇಷನ್ ಸರ್ಕಲ್ (Corporation Circle) ಬಳಿ ನೆರೆದಿರುವವರು, ಬಸ್​ಗಳಿಂದ ಇಳಿಯುತ್ತಿರುವವರು, ಅಸಹಾಯಕತೆಯಿಂದ ದಯೆತೋರದ ಆಗಸದ ಕಡೆ ನೋಡುತ್ತಿರುವವರು-ಎಲ್ಲ ಆಫೀಸುಗಳಿಗೆ ಹೋಗಬೇಕಾದ ಜನ. ಬೈಕ್​ಗಳಲ್ಲಿ ಹೋಗುತ್ತಿದ್ದವರು ಮಳೆ ಹೆಚ್ಚಾದ ಕಾರಣ ಬಸ್ ಸ್ಟಾಪ್ ಬಳಿ ವಾಹನಗಳನ್ನು ನಿಲ್ಲಿಸಿ ನಿಲ್ದಾಣದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಇದನ್ನೂ ಓದಿ:  Bengaluru Rains: ಭಾರಿ ಮಳೆಗೆ ಬೆಂಗಳೂರು ಹೈರಾಣ, ಮನೆಗಳಿಗೆ ನುಗ್ಗಿದ ರಾಜಕಾಲುವೆ ನೀರು, ಹಲವೆಡೆ ಸಂಚಾರಕ್ಕೆ ಅಡಚಣೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.