ಸಿನಿಮೋತ್ಸವದ ಬಗ್ಗೆ ಗೌರವ ಇಲ್ಲದವರು ಅದನ್ನು ಉತ್ಸವ ಆಗಿ ಆಚರಿಸಲು ಹೇಗೆ ಸಾಧ್ಯ? ರಾಜ್​ ಬಿ. ಶೆಟ್ಟಿ ಪ್ರಶ್ನೆ

| Updated By: ರಾಜೇಶ್ ದುಗ್ಗುಮನೆ

Updated on: Mar 06, 2022 | 4:13 PM

‘ಪೆದ್ರೊ’ ಸಿನಿಮಾ ವಿದೇಶಗಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಗೆದ್ದಿದೆ. ಆದರೆ, ನಮ್ಮದೇ ನೆಲದಲ್ಲಿ ನಡೆಯುತ್ತಿರುವ ಸಿನಿಮೋತ್ಸವದಲ್ಲಿ ಕನ್ನಡ ಚಿತ್ರಕ್ಕೆ ಅವಕಾಶ ಸಿಕ್ಕಿಲ್ಲ ಅನ್ನೋದು ಬೇಸರದ ಸಂಗತಿ.

ಈ ಬಾರಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ವಿವಾದಕ್ಕೆ ಗುರಿಯಾಗಿದೆ. ನಟೇಶ್​ ಹೆಗಡೆ ನಿರ್ದೇಶನದ ‘ಪೆದ್ರೊ’ ಸಿನಿಮಾವನ್ನು (Pedro Movie) ರಿಷಬ್​ ಶೆಟ್ಟಿ (Rishab Shetty)ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ವಿದೇಶಗಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಗೆದ್ದಿದೆ. ಆದರೆ, ನಮ್ಮದೇ ನೆಲದಲ್ಲಿ ನಡೆಯುತ್ತಿರುವ ಸಿನಿಮೋತ್ಸವದಲ್ಲಿ ಕನ್ನಡ ಚಿತ್ರಕ್ಕೆ ಅವಕಾಶ ಸಿಕ್ಕಿಲ್ಲ ಅನ್ನೋದು ಬೇಸರದ ಸಂಗತಿ. ಈ ಬಗ್ಗೆ ರಾಜ್​ ಬಿ ಶೆಟ್ಟಿ (Raj B Shetty) ಮಾತನಾಡಿದ್ದಾರೆ. ‘ಇದೊಂದು ಮಿಸ್ಟ್ರಿ. ನಮ್ಮ ತಂಡದವರು ಕಾರಣ ಕೇಳಿದಾಗ ಜ್ಯೂರಿ ಅವರ ಹೆಸರನ್ನು ತೆಗೆದುಕೊಂಡರು. ಪ್ರೆಸ್ ಅವರು ಕೇಳಿದಾಗ ಧಾರ್ಮಿಕ ಭಾವನೆಗೆ ಧಕ್ಕೆ ತರ್ತಿದೆ ಈ ಸಿನಿಮಾ ಎಂದರು. ಒಂದು ಸಿನಿಮಾ ಸೆಲೆಕ್ಟ್​ ಆಗದೇ ಇದ್ದರೆ ಏನೂ ಆಗುವುದಿಲ್ಲ ಎಂದು ಚಿತ್ರೋತ್ಸವ ನಡೆಸುವವರು ಹೇಳುತ್ತಾರೆ ಸಿನಿಮೋತ್ಸವದ ಬಗ್ಗೆ ಗೌರವ ಇಲ್ಲದವರು ಅದನ್ನು ಉತ್ಸವ ಆಗಿ ಆಚರಿಸಲು ಹೇಗೆ ಸಾಧ್ಯ’ ಎಂದು ರಾಜ್​ ಬಿ. ಶೆಟ್ಟಿ ಪ್ರಶ್ನೆ ಮಾಡಿದರು.

ಇದನ್ನೂ ಓದಿ: Hombale Films: ಹೊಂಬಾಳೆ ಫಿಲ್ಮ್ಸ್​ನ 11ನೇ ಚಿತ್ರ ಕಾಂತಾರ; ನಿರ್ದೇಶಕ ಮತ್ತು ನಾಯಕನಾಗಿ ರಿಷಬ್ ಶೆಟ್ಟಿ

Shiva Rajkumar: ಶಿವರಾಜ್ ಕುಮಾರ್ 126ನೇ ಚಿತ್ರಕ್ಕೆ ರಿಷಬ್ ಶೆಟ್ಟಿ ನಿರ್ದೇಶನ ಖಚಿತ; ಯಾವಾಗ ಸೆಟ್ಟೇರಲಿದೆ ಸಿನಿಮಾ?

Follow us on