ಚಡ್ಡಿ ಬಗ್ಗೆ ಮಾತನಾಡುವ ಜಮೀರ್ ಅಹ್ಮದ್​ ಖಾನ್,​ ಸಿಟಿ ರವಿ ಜೊತೆ ಚಡ್ಡಿ ಹಾಕಿ ನಿಂತವ್ರಲ್ಲಾ! ಜಮೀರನ್ನ ಹುಟ್ಟಿಸಿದ್ದೇ ಜೆಡಿಎಸ್ ಎಂದ ಚನ್ನಪಟ್ಟಣ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ

ಮುಸ್ಲಿಂ ಹೆಸರೇಳಿ ರಾಜಕೀಯ ಮಾಡ್ತಾ ಇರೋದು ನೀವು. ಚಡ್ಡಿ ಗಿಡ್ಡಿ ಅಂತೆಲ್ಲಾ ಹೇಳಬೇಡಿ. ಜಮೀರ್ ಅವರೇ ನಿಮ್ಮನ್ ಹುಟ್ಟಿಸಿದ್ದೇ ಜೆಡಿಎಸ್. ನಿಮ್ಮ ತಾಯಿನೇ ಜೆಡಿಎಸ್, ಸಿದ್ರಾಮಯ್ಯ ಅವರನ್ನೂ ಹುಟ್ಟಿಸಿದ್ದು ಇದೇ ಜೆಡಿ ಎಸ್ ಪಕ್ಷ. ಇಲ್ದಿದ್ರೆ ಜಮೀರ್ ಬಸ್ ಓಡಿಸಿಕೊಂಡೇ ಇರಬೇಕಿತ್ತು -ಚನ್ನಪಟ್ಟಣದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಮೋರ್ಚಾ ಸೈಯ್ಯದ್ ಫಾಜಿಲ್

ರಾಮನಗರ: ಚನ್ನಪಟ್ಟಣದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ನಿನ್ನೆ ಬುಧವಾರ ಸೈಯ್ಯದ್ ಫಾಜಿಲ್ ಪತ್ರಿಕಾಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿ ವಿವರ ಹೀಗಿದೆ. ಎನ್ ಆರ್ ಸಿ , ಹಲಾಲ್ ಕಟ್, ಹಿಜಾಬ್ ವಿಚಾರದಲ್ಲಿ ನಮ್ಮ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನಮ್ ಜೊತೆ ಇದ್ರು. ಕುಮಾರಸ್ವಾಮಿ ಅವರು ಮುಸ್ಲಿಂ ಪಕ್ಷಕ್ಕೆ ಏನಾದ್ರೂ ದ್ರೋಹ ಮಾಡಿದ್ದಾರಾ? ಅವರೇನು ಬಿಜೆಪಿ ಹೋಗ್ತಾ ಇದ್ದಾರಾ? ಅವರು ಜೆಡಿಎಸ್ ನಲ್ಲೇ ಇದ್ದಾರೆ. ಕಾಂಗ್ರೆಸ್ ನವರು ಬಿಜೆಪಿಗೆ ಹೋಗೇ ಇಲ್ವಾ? ಚನ್ನಪಟ್ಟಣ ವಿಚಾರವಾಗಿ ಕುಮಾರಸ್ವಾಮಿ ಮಾಡಿರುವ ಅಭಿವೃದ್ಧಿ ಯಾರೂ ಮಾಡಿಲ್ಲ.

ಜೆಡಿಎಸ್ ಇಲ್ದಿದ್ರೆ ಜಮೀರ್ ಬಸ್ ಓಡಿಸಿಕೊಂಡೇ ಇರಬೇಕಿತ್ತು…

ಕುಮಾರಸ್ವಾಮಿಯವರು ಚಡ್ಡಿ ಹಾಕ್ತಾರೋ, ಲುಂಗಿ ಹಾಕ್ತಾರೋ ಬೇ್ರೆಯರಿಗೆ ಯಾಕೆ? ಸಿ ಟಿ ರವಿ ಜತೆ ಜಮೀರ್ ಅಹ್ಮದ್ ಚಡ್ಡಿ ಹಾಕಿ ನಿಂತಿದ್ದಾರಲ್ಲ! 2006 ರಲ್ಲಿ ಅವರ ಜತೆನೇ ಇದ್ದೀರಲ್ಲ. ರಾಜ್ಯದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಬದುಕ್ತಾ ಇದ್ದೀವಿ. ಕುಮಾರಸ್ವಾಮಿ ಯವರು ನಮಗೆ ಯಾವತ್ತೂ ಬೇಜಾರ್ ಮಾಡಿಲ್ಲ. ನಾವು ತೋಟಕ್ಕೆ ಹೋದಗಲೆಲ್ಲಾ ಸಿಕ್ತಾರೆ. ಯಾವಾಗ ಬೇಕಾದ್ರೂ ಹೋಗಲಿ ಅವರು ನಮಗೆ ಸಿಕ್ತಾರೆ. ಮುಸ್ಲಿಂ ಹೆಸರೇಳಿ ರಾಜಕೀಯ ಮಾಡ್ತಾ ಇರೋದು ನೀವು. ಚಡ್ಡಿ ಗಿಡ್ಡಿ ಅಂತೆಲ್ಲಾ ಹೇಳಬೇಡಿ. ಜಮೀರ್ ಅವರೇ ನಿಮ್ಮನ್ ಹುಟ್ಟಿಸಿದ್ದೇ ಜೆಡಿಎಸ್. ನಿಮ್ಮ ತಾಯಿನೇ ಜೆಡಿಎಸ್, ಸಿದ್ರಾಮಯ್ಯ ಅವರನ್ನೂ ಹುಟ್ಟಿಸಿದ್ದು ಇದೇ ಜೆಡಿ ಎಸ್ ಪಕ್ಷ. ಇಲ್ದಿದ್ರೆ ಜಮೀರ್ ಬಸ್ ಓಡಿಸಿಕೊಂಡೇ ಇರಬೇಕಿತ್ತು. ಕುಮಾರಸ್ವಾಮಿ ಯವರು ಎಲ್ಲಿ ಹೋಗ್ತಾರೆ ಅನ್ನೋದೇ ಗೊತ್ತಿಲ್ಲ. ನಾವು ಕುಮಾರಸ್ವಾಮಿ ಯವರಿಗೆ ಬೆಂಬಲ ಕೊಡ್ತೀವಿ ಎಂದು ಸೈಯ್ಯದ್ ಫಾಜಿಲ್ ಹೇಳಿದರು.

Syed Nizamuddin

ಕಳೆದ ನಾಲ್ಕು ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, ಹಲವು ಬಗೆಯ ಡಿಪಾರ್ಟ್ಮೆಂಟ್ ಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಪ್ರಥಮದಲ್ಲಿ ಟಿವಿ9 ಮುಖ್ಯ ಕಚೇರಿಯಲ್ಲಿಯೇ ಕೆಲಸ ಮಾಡಿ,‌ಮೆಟ್ರೋ,ಪೊಲಿಟಿಕಲ್, ಕ್ರೈಂ ಹಾಗೂ ಲೈಫ್ ಸ್ಟೈಲ್ ನ ವಿಭಾಗದಲ್ಲೂ ಕೆಲಸ ಮಾಡುವ ಅವಕಾಶ ದೊರಕಿತ್ತು. ಕೊರೊನಾ ಸಂದರ್ಭದಲ್ಲಿ ಮಾಡಿದ ಕೇಸ್ ಸ್ಟಡಿಸ್, ನಂತರ ಬ್ಲ್ಯಾಕ್ ಫಂಗಸ್ ಗಾಗಿ ಒಂದು ತಿಂಗಳು ವಿಜಯಪುರ ಜಿಲ್ಲೆ, ಬಳಿಕ ಎರಡು ವರ್ಷ ಆನೆಕಲ್‌ ನಲ್ಲಿ ಕೆಲಸ ಮಾಡಿ ಕಳೆದ ಆರು ತಿಂಗಳಿನಿಂದ ರಾಮನಗರ ಜಿಲ್ಲೆಯಲ್ಲಿ ಕೆಲಸ ನಿಭಾಯಿಸುತ್ತಿದ್ದೇನೆ. ಖುಷಿ ಕೊಟ್ಟ ಸಾವಿರಾರು ಸುದ್ದಿಗಳ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಟ್ ಚಾಟ್ ಬಹಳ ತೃಪ್ತಿ ತಂದ ಹೈಲೇಟ್.. ಆನೇಕಲ್‌ ನ ಡ್ರಗ್ಸ್ ಸ್ಟೋರಿ, ಪರಪ್ಪನ ಅಗ್ರಹಾರದ ಆಫಿಸರ್ಸ್ ಸ್ಕ್ಯಾಂಡಲ್, ಎಲೆಕ್ಟ್ರಾನಿಕ್ ಸಿಟಿ ಯ ಟೋಯಿಂಗ್ ಬಂದ್, ಸರ್ಜಾಪುರದ ಪ್ರವಾಹ ಸಂದರ್ಭ,ಹೀಗೆ ಹತ್ತು ಹಲವು ಸುದ್ದಿಗಳು ಖಷಿ ಕೊಟ್ಟಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹಲವು ರಾಜ್ಯಗಳಿಗೆ ತೆರಳಿ ಹಿಂದಿ‌ಹಾಗೂ ಕನ್ನಡಕ್ಕೆ ಕೆಲಸ ಮಾಡೋ ಅವಕಾಶ ನನ್ನ ಇನ್ಪುಟ್ ಟೀಂ ಕೊಟ್ಟಿದೆ. ಇನ್ನು ಹವ್ಯಾಸ ಗ್ಗೆ ಹೇಳೋದಾದ್ರೆ, ಸಂಗೀತ,ಕೇಳೊದು,ಹಾಡೋದು ಇಷ್ಟ. ಕ್ರೀಡೆ ವಿಚಾರಕ್ಕೆ ಬಂದ್ರೆ ಕ್ರಿಕೆಟ್ ಅಂಡ್ ಕಬ್ಬಡ್ಡಿ ಸ್ವಿಮಿಂಗ್. ಸ

Read More
Follow Us