ಗಂಡನನ್ನು ನದಿಗೆ ತಳ್ಳಿ ಕೊಲೆ ಯತ್ನ ಪ್ರಕರಣ: ಖಚಿತವಾಗಿ ಕೊಲೆ ಯತ್ನ ನಡೆದಿದೆ ಎನ್ನುತ್ತಾರೆ ಸಂಬಂಧಿಕರು

ಅರುಣ್​ ಕುಮಾರ್​ ಬೆಳ್ಳಿ

Updated on: Jul 15, 2025 | 3:58 PM

ಗದ್ದೆಮ್ಮಳಿಗೆ ತಾತಪ್ಪನನ್ನು ಮದುವೆಯಾಗುವ ಮನಸ್ಸು ಇಲ್ಲದೇ ಹೋಗಿದ್ದರೆ ಮದುವೆಗೆ ಮೊದಲೇ ಸ್ಪಷ್ಟಪಡಿಸಬೇಕಿತ್ತು. ಗಂಡನ ಮನೆಯವರು ಪೊಲೀಸ್ ದೂರು ನೀಡದೆ ಆಕೆಯನ್ನು ಕ್ಷಮಿಸಿ, ಡಿವೋರ್ಸ್ ಪಡೆದುಕೊಂಡು ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಲು ತೀರ್ಮಾನಿಸಿದ್ದು ಅಕೆಯ ಅದೃಷ್ಟವಲ್ಲದೆ ಮತ್ತೇನೂ ಅಲ್ಲ. ಈಗಾಗಲೇ ಮದುವೆಯಾಗಿ ಕೊಲೆ ಯತ್ನದ ಅರೋಪವನ್ನೂ ಹೊತ್ತಿರುವ ಆಕೆ ಪುನರ್ವಿವಾಹ ಸುಲಭವಲ್ಲ, ಆಕೆ ಯಾರನ್ನಾದರೂ ಪ್ರೀತಿಸುತ್ತಿದ್ದರೆ ಆ ವಿಷಯ ಬೇರೆ.

ರಾಯಚೂರು, ಜುಲೈ 15: ಗಂಡನನ್ನು ಗುರ್ಜಾಪುರ ಸೇತುವೆಯ ಮೇಲೆ ನಿಲ್ಲಿಸಿ ಫೋಟೋ ಕ್ಲಿಕ್ಕಿಸುವ ನೆಪ ಕೃಷ್ಣಾ ನದಿಗೆ ತಳ್ಳಿ ಪತ್ನಿಯು ಕೊಲೆಗೆ ಯತ್ನ ನಡೆಸಿದಳೆಂಬ ಅರೋಪದ ಸುದ್ದಿ ಮತ್ತು ಗಂಡ ಬದುಕುಳಿದ ವಿಡಿಯೋ ಸಾಕಷ್ಟು ವೈರಲ್ ಅಗಿದೆ. ರಾಯಚೂರು ತಾಲೂಕಿನಲ್ಲಿ ನಡೆದ ಪ್ರಕರಣವು ನದಿಗೆ ತಳ್ಳಿಸಿಕೊಂಡ ಗಂಡ ತಾತಪ್ಪ ಮತ್ತು ತಳ್ಳಿದ ಆರೋಪ ಹೊತ್ತಿರುವ ಪತ್ನಿ ಗದ್ದೆಮ್ಮ ರಾಜಿ ಸಂಧಾನದ ನಂತರ ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆಯಲು ನಿರ್ಧರಿಸುವ ಮೂಲಕ ಅಂತ್ಯ ಕಂಡಿದೆ. ನಮ್ಮ ರಾಯಚೂರು ವರದಿಗಾರನೊಂದಿಗೆ ಮಾತಾಡಿರುವ ತಾತಪ್ಪನ ಸಹೋದರರು ಡಿವೋರ್ಸ್ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. ತಮ್ಮಲ್ಲಿರುವ ಕೆಲವು ಫೋಟೋಗಳನ್ನು ತೋರಿಸುವ ಅವರು ಕೊಲೆಗೆ ಯತ್ನ ನಡೆದಿರುವುದು ಖಚಿತ ಎನ್ನುತ್ತಾರೆ.

ಇದನ್ನೂ ಓದಿ:  ಗಂಡನನ್ನು ಕೊಲ್ಲುವುದು ಹೇಗೆಂದು ಯೂಟ್ಯೂಬ್​​ನಲ್ಲಿ ಹುಡುಕಾಟ; ಕೊನೆಗೆ ಪತ್ನಿ ಆಯ್ಕೆ ಮಾಡಿಕೊಂಡ ವಿಧಾನವಿದು!

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.