ಕೊಲೆಗೂ ಮುನ್ನ ದರ್ಶನ್​ ಗ್ಯಾಂಗ್ ಜೊತೆ ರೇಣುಕಾ ಸ್ವಾಮಿ ಮಾತು; ವಿಡಿಯೋ ವೈರಲ್​

|

Updated on: Jun 13, 2024 | 3:51 PM

ನಟ ದರ್ಶನ್ ಮತ್ತು ಅವರ ಗ್ಯಾಂಗ್​​ನಿಂದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ದಿನಕ್ಕೊಂದು ತಿರುವು ಪಡೆಯುತ್ತಿದೆ. ಅದರಂತೆ ಇದೀಗ ವಿಡಿಯೋ ಒಂದು ದೊರೆತಿದ್ದು, ಜೂನ್ ಮೊದಲ ವಾರದಿಂದಲೇ ದರ್ಶನ್ ಗ್ಯಾಂಗ್ ಸ್ವಾಮಿ ಬೆನ್ನುಬಿದ್ದಿತ್ತಾ ಎಂಬ ಅನುಮಾನ ಮೂಡಿದೆ. 

ಚಿತ್ರದುರ್ಗ, ಜೂ.13: ನಟ ದರ್ಶನ್ ಮತ್ತು ಅವರ ಗ್ಯಾಂಗ್​​ನಿಂದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ದಿನಕ್ಕೊಂದು ತಿರುವು ಪಡೆಯುತ್ತಿದೆ. ಅದರಂತೆ ಇದೀಗ ವಿಡಿಯೋ ಒಂದು ದೊರೆತಿದ್ದು, ಜೂನ್ 2ರಂದೇ ರೇಣುಕಾಸ್ವಾಮಿಗೆ ಬೆದರಿಕೆ ಕರೆ ಬಂದಿತ್ತಾ ? ಎಂಬ ಅನುಮಾನ ಮೂಡಿದೆ. ಜೂನ್ 2ರಂದು 25 ನಿಮಿಷಗಳ ಕಾಲ ಅಂದರೆ  ಮಧ್ಯಾಹ್ನ 2.15ರಿಂದ 2.40ರವರೆಗೆ ಅಪೋಲೊ ಫಾರ್ಮಸಿಯಿಂದ ಹೊರಬಂದು ಸ್ಕೂಟಿ ಮೇಲೆ ಕುಳಿತುಕೊಂಡೇ ಸ್ವಾಮಿ ಫೋನ್​ನಲ್ಲಿ ಮಾತಾಡಿದ್ದ. ಕರೆ ಬಳಿಕ ಕೊಲೆಯಾದ ರೇಣುಕಾ ಸ್ವಾಮಿ ವಿಚಲಿತನಾದಂತೆ ಕಂಡು ಬಂದಿದ್ದ. ಆತ
ಫೋನ್​ನಲ್ಲಿ ಮಾತಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜೂನ್ ಮೊದಲ ವಾರದಿಂದಲೇ ದರ್ಶನ್ ಗ್ಯಾಂಗ್ ಸ್ವಾಮಿ ಬೆನ್ನುಬಿದ್ದಿತ್ತಾ ಎಂಬ ಅನುಮಾನ ಮೂಡಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on