AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್​ ಕೇಸ್​; ಕಾಲು ಮುರಿದರೂ ಪಿಎಸ್​ಐ ಗೆ ಡ್ಯೂಟಿಗೆ ಬರಲು ಹಿರಿಯ ಅಧಿಕಾರಿಗಳಿಂದ ಸೂಚನೆ

ನಟ ದರ್ಶನ್ ಟೀಂನಿಂದ ಕೊಲೆ ಕೇಸ್​ ಹಿನ್ನಲೆ ಕಾಲು ಮುರಿದರೂ ಪಿಎಸ್​ಐ(PSI)ಗೆ ಕೆಲಸಕ್ಕೆ ಬರುವುದಕ್ಕೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ನಡೆದಿದೆ. ಸಧ್ಯ ವಾಕಿಂಗ್​ ಸ್ಟಿಕ್ ಹಿಡಿದುಕೊಂಡೇ ಪಿಎಸ್ಐ ಕುಬೇರ ಎಂಬುವವರು ಡ್ಯೂಟಿಗೆ ಬಂದಿದ್ದಾರೆ.

ದರ್ಶನ್​ ಕೇಸ್​; ಕಾಲು ಮುರಿದರೂ ಪಿಎಸ್​ಐ ಗೆ ಡ್ಯೂಟಿಗೆ ಬರಲು ಹಿರಿಯ ಅಧಿಕಾರಿಗಳಿಂದ ಸೂಚನೆ
ಕಾಲು ಮುರಿದರೂ ಪಿಎಸ್​ಐ ಗೆ ಡ್ಯೂಟಿಗೆ ಬರಲು ಹಿರಿಯ ಅಧಿಕಾರಿಗಳಿಂದ ಸೂಚನೆ
ಕಿರಣ್ ಹನುಮಂತ್​ ಮಾದಾರ್
|

Updated on:Jun 13, 2024 | 3:21 PM

Share

ಬೆಂಗಳೂರು, ಜೂ.13: ಕಾಲು ಮುರಿದರೂ ಪಿಎಸ್​ಐ(PSI)ಗೆ ಕೆಲಸಕ್ಕೆ ಬರುವುದಕ್ಕೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿರುವ ಘಟನೆ ನಡೆದಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆ(Annapoorneshwari Nagar Police Station) ಪಿಎಸ್​ಐ ಆಗಿರುವ ಕುಬೇರ ಅವರು ಕರ್ತವ್ಯದ ವೇಳೆ ಬೈಕ್ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದರು. ಕಳೆದ ಆರು ತಿಂಗಳಿಂದ ಬೆಡ್ ರೆಸ್ಟ್​ನಲ್ಲಿದ್ದರೂ ಇಲಾಖೆ ಸಂಬಳ ಹಾಕದೆ, ಕೆಲಸಕ್ಕೆ ಬಂದರೆ ಮಾತ್ರ ಸಂಬಳ ಕೊಡೋದಾಗಿ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.

ದರ್ಶನ್ ಟೀಂನಿಂದ ಕೊಲೆ ಕೇಸ್​ ಹಿನ್ನಲೆ ಡ್ಯೂಟಿಗೆ ಕರೆಸಿರೋ ಹಿರಿಯ ಅಧಿಕಾರಿಗಳು

ಆರು ತಿಂಗಳಿಂದ ಸಂಬಳ ಇಲ್ಲದೆ ಇದ್ದರೂ ತನ್ನ ಕುಟುಂಬ ಮತ್ತು ಚಿಕಿತ್ಸೆ ವೆಚ್ಚವನ್ನು ತಾವೇ ನೋಡಿಕೊಂಡಿದ್ದಾರೆ. ಈ ಮಧ್ಯೆ ನಟ ದರ್ಶನ್ ಟೀಂನಿಂದ ಕೊಲೆ ಕೇಸ್​ ಹಿನ್ನಲೆ ಕೆಲಸಕ್ಕೆ ಹಾಜರಾಗಲು ಹಿರಿಯ ಅಧಿಕಾರಿಗಳು ಕರೆಸಿದ್ದಾರೆ. ಸಧ್ಯ ವಾಕಿಂಗ್​ ಸ್ಟಿಕ್ ಹಿಡಿದುಕೊಂಡೇ ಪಿಎಸ್ಐ ಕುಬೇರ ಡ್ಯೂಟಿಗೆ ಬಂದಿದ್ದಾರೆ. ಈ ಮೂಲಕ ಹಿರಿಯ ಪೊಲೀಸ್​ ಅಧಿಕಾರಿಗಳು ಮಾನವೀಯತೆ ಮರೆತರಾ? ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ:ದರ್ಶನ್‌ ನೋಡಲು ಕಿಕ್ಕಿರಿದ ಫ್ಯಾನ್ಸ್; ಜೀಪ್‌ ಹಿಂದೆ ಪೊಲೀಸರ ಓಟ

ನಟ ದರ್ಶನ್ ಮತ್ತು ಗ್ಯಾಂಗ್​ನಿಂದ ಅಭಿಮಾನಿ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ತೀವ್ರ ಸ್ವರೂಪ ಪಡೆದಿದೆ. ಈ ಹಿನ್ನಲೆ ಆರೋಪಿ ದರ್ಶನ್​ ಹಾಗೂ ಪವಿತ್ರಾ ಸೇರಿ ಎಲ್ಲಾ ಆರೋಪಿಗಳನ್ನು ಕರೆದುಕೊಂಡು ಹೋಗಿ ಕೊಲೆ ನಡೆದ ಪಟ್ಟಣಗೆರೆ ಶೆಡ್‌ನಲ್ಲಿ ನಿನ್ನೆ ಸ್ಥಳ ಮಹಜರು ನಡೆಸಿದ್ದರು. ಬಳಿಕ ಅನ್ನಪೂರ್ಣೇಶ್ವರಿನಗರ ಠಾಣೆಗೆ ವಾಪಸ್‌ ಕರೆತಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:14 pm, Thu, 13 June 24

ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ
ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು