AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್​ ಕೇಸ್​; ಕಾಲು ಮುರಿದರೂ ಪಿಎಸ್​ಐ ಗೆ ಡ್ಯೂಟಿಗೆ ಬರಲು ಹಿರಿಯ ಅಧಿಕಾರಿಗಳಿಂದ ಸೂಚನೆ

ನಟ ದರ್ಶನ್ ಟೀಂನಿಂದ ಕೊಲೆ ಕೇಸ್​ ಹಿನ್ನಲೆ ಕಾಲು ಮುರಿದರೂ ಪಿಎಸ್​ಐ(PSI)ಗೆ ಕೆಲಸಕ್ಕೆ ಬರುವುದಕ್ಕೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ನಡೆದಿದೆ. ಸಧ್ಯ ವಾಕಿಂಗ್​ ಸ್ಟಿಕ್ ಹಿಡಿದುಕೊಂಡೇ ಪಿಎಸ್ಐ ಕುಬೇರ ಎಂಬುವವರು ಡ್ಯೂಟಿಗೆ ಬಂದಿದ್ದಾರೆ.

ದರ್ಶನ್​ ಕೇಸ್​; ಕಾಲು ಮುರಿದರೂ ಪಿಎಸ್​ಐ ಗೆ ಡ್ಯೂಟಿಗೆ ಬರಲು ಹಿರಿಯ ಅಧಿಕಾರಿಗಳಿಂದ ಸೂಚನೆ
ಕಾಲು ಮುರಿದರೂ ಪಿಎಸ್​ಐ ಗೆ ಡ್ಯೂಟಿಗೆ ಬರಲು ಹಿರಿಯ ಅಧಿಕಾರಿಗಳಿಂದ ಸೂಚನೆ
ಕಿರಣ್ ಹನುಮಂತ್​ ಮಾದಾರ್
|

Updated on:Jun 13, 2024 | 3:21 PM

Share

ಬೆಂಗಳೂರು, ಜೂ.13: ಕಾಲು ಮುರಿದರೂ ಪಿಎಸ್​ಐ(PSI)ಗೆ ಕೆಲಸಕ್ಕೆ ಬರುವುದಕ್ಕೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿರುವ ಘಟನೆ ನಡೆದಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆ(Annapoorneshwari Nagar Police Station) ಪಿಎಸ್​ಐ ಆಗಿರುವ ಕುಬೇರ ಅವರು ಕರ್ತವ್ಯದ ವೇಳೆ ಬೈಕ್ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದರು. ಕಳೆದ ಆರು ತಿಂಗಳಿಂದ ಬೆಡ್ ರೆಸ್ಟ್​ನಲ್ಲಿದ್ದರೂ ಇಲಾಖೆ ಸಂಬಳ ಹಾಕದೆ, ಕೆಲಸಕ್ಕೆ ಬಂದರೆ ಮಾತ್ರ ಸಂಬಳ ಕೊಡೋದಾಗಿ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.

ದರ್ಶನ್ ಟೀಂನಿಂದ ಕೊಲೆ ಕೇಸ್​ ಹಿನ್ನಲೆ ಡ್ಯೂಟಿಗೆ ಕರೆಸಿರೋ ಹಿರಿಯ ಅಧಿಕಾರಿಗಳು

ಆರು ತಿಂಗಳಿಂದ ಸಂಬಳ ಇಲ್ಲದೆ ಇದ್ದರೂ ತನ್ನ ಕುಟುಂಬ ಮತ್ತು ಚಿಕಿತ್ಸೆ ವೆಚ್ಚವನ್ನು ತಾವೇ ನೋಡಿಕೊಂಡಿದ್ದಾರೆ. ಈ ಮಧ್ಯೆ ನಟ ದರ್ಶನ್ ಟೀಂನಿಂದ ಕೊಲೆ ಕೇಸ್​ ಹಿನ್ನಲೆ ಕೆಲಸಕ್ಕೆ ಹಾಜರಾಗಲು ಹಿರಿಯ ಅಧಿಕಾರಿಗಳು ಕರೆಸಿದ್ದಾರೆ. ಸಧ್ಯ ವಾಕಿಂಗ್​ ಸ್ಟಿಕ್ ಹಿಡಿದುಕೊಂಡೇ ಪಿಎಸ್ಐ ಕುಬೇರ ಡ್ಯೂಟಿಗೆ ಬಂದಿದ್ದಾರೆ. ಈ ಮೂಲಕ ಹಿರಿಯ ಪೊಲೀಸ್​ ಅಧಿಕಾರಿಗಳು ಮಾನವೀಯತೆ ಮರೆತರಾ? ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ:ದರ್ಶನ್‌ ನೋಡಲು ಕಿಕ್ಕಿರಿದ ಫ್ಯಾನ್ಸ್; ಜೀಪ್‌ ಹಿಂದೆ ಪೊಲೀಸರ ಓಟ

ನಟ ದರ್ಶನ್ ಮತ್ತು ಗ್ಯಾಂಗ್​ನಿಂದ ಅಭಿಮಾನಿ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ತೀವ್ರ ಸ್ವರೂಪ ಪಡೆದಿದೆ. ಈ ಹಿನ್ನಲೆ ಆರೋಪಿ ದರ್ಶನ್​ ಹಾಗೂ ಪವಿತ್ರಾ ಸೇರಿ ಎಲ್ಲಾ ಆರೋಪಿಗಳನ್ನು ಕರೆದುಕೊಂಡು ಹೋಗಿ ಕೊಲೆ ನಡೆದ ಪಟ್ಟಣಗೆರೆ ಶೆಡ್‌ನಲ್ಲಿ ನಿನ್ನೆ ಸ್ಥಳ ಮಹಜರು ನಡೆಸಿದ್ದರು. ಬಳಿಕ ಅನ್ನಪೂರ್ಣೇಶ್ವರಿನಗರ ಠಾಣೆಗೆ ವಾಪಸ್‌ ಕರೆತಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:14 pm, Thu, 13 June 24

2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ಕೃಷಿ ಅಧಿಕಾರಿ ಬಳಿ 2.50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ!
ಕೃಷಿ ಅಧಿಕಾರಿ ಬಳಿ 2.50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ!
ಬಾಲರಾಮನ ವಿಗ್ರಹವನ್ನು ರಾಮ ಮಂದಿರಕ್ಕೆ ದಾನ ಮಾಡಿದ ಕರ್ನಾಟಕದ ಭಕ್ತ
ಬಾಲರಾಮನ ವಿಗ್ರಹವನ್ನು ರಾಮ ಮಂದಿರಕ್ಕೆ ದಾನ ಮಾಡಿದ ಕರ್ನಾಟಕದ ಭಕ್ತ