ದರ್ಶನ್‌ ನೋಡಲು ಕಿಕ್ಕಿರಿದ ಫ್ಯಾನ್ಸ್; ಜೀಪ್‌ ಹಿಂದೆ ಪೊಲೀಸರ ಓಟ

ನಟ ದರ್ಶನ್(Darshan Thoogudeepa)  ಮತ್ತು ಗ್ಯಾಂಗ್​ನಿಂದ ಅಭಿಮಾನಿ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಜೂ.12) ಆರೋಪಿ ದರ್ಶನ್​ ಹಾಗೂ ಪವಿತ್ರಾ ಸೇರಿ ಎಲ್ಲಾ ಆರೋಪಿಗಳನ್ನು ಕರೆದುಕೊಂಡು ಹೋಗಿ ಕೊಲೆ ನಡೆದ ಪಟ್ಟಣಗೆರೆ(Pattanagere)ಶೆಡ್‌ನಲ್ಲಿ ಸ್ಥಳ ಮಹಜರು ನಡೆಸಿದ್ದರು. ಸ್ಥಳ ಮಹಜರು ಮುಗಿಸಿ ಬರುವಾಗ ನಟ ದರ್ಶನ್​ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿದ್ದರು. ಈ ಹಿನ್ನಲೆ ಪೊಲೀಸರು ಜೀಪ್​ ಹಿಂದೆ ಓಡುವ ಪರಿಸ್ಥಿತಿ ಎದುರಾಯಿತು.

ದರ್ಶನ್‌ ನೋಡಲು ಕಿಕ್ಕಿರಿದ ಫ್ಯಾನ್ಸ್; ಜೀಪ್‌ ಹಿಂದೆ ಪೊಲೀಸರ ಓಟ
|

Updated on: Jun 12, 2024 | 7:16 PM

ಬೆಂಗಳೂರು, ಜೂ.12: ನಟ ದರ್ಶನ್(Darshan Thoogudeepa)  ಮತ್ತು ಗ್ಯಾಂಗ್​ನಿಂದ ಅಭಿಮಾನಿ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಜೂ.12) ಆರೋಪಿ ದರ್ಶನ್​ ಹಾಗೂ ಪವಿತ್ರಾ ಸೇರಿ ಎಲ್ಲಾ ಆರೋಪಿಗಳನ್ನು ಕರೆದುಕೊಂಡು ಹೋಗಿ ಕೊಲೆ ನಡೆದ ಪಟ್ಟಣಗೆರೆ(Pattanagere)ಶೆಡ್‌ನಲ್ಲಿ ಸ್ಥಳ ಮಹಜರು ನಡೆಸಿದ್ದರು. ಬಳಿಕ ಅನ್ನಪೂರ್ಣೇಶ್ವರಿನಗರ ಠಾಣೆಗೆ ವಾಪಸ್‌ ಕರೆತಂದಿದ್ದಾರೆ. ಸ್ಥಳ ಮಹಜರು ಮುಗಿಸಿ ಬರುವಾಗ ನಟ ದರ್ಶನ್​ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿದ್ದರು. ಈ ಹಿನ್ನಲೆ ಪೊಲೀಸರು ಜೀಪ್​ ಹಿಂದೆ ಓಡುವ ಪರಿಸ್ಥಿತಿ ಎದುರಾಯಿತು. ಇನ್ನು ಮಧ್ಯಾಹ್ನವು ಅನ್ನಪೂರ್ಣೇಶ್ವರಿನಗರ ಠಾಣೆ ಮುಂದೆ ಆಗಮಿಸಿದ ಫ್ಯಾನ್ಸ್, ಡಿ ಬಾಸ್ ಗೆ ಜೈ ಎಂದು​ ಕೂಗಾಟ ನಡೆಸಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು, ಲಾಠಿ ಬಿಸಿ ಅಭಿಮಾನಿಗಳನ್ನ ಚದುರಿಸಿದ್ದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us