ಜಾಮೀನು ಸಿಕ್ಕ 6 ದಿನದ ಬಳಿಕ ಶಿವಮೊಗ್ಗ ಜೈಲಿನಿಂದ ಆರೋಪಿ ಜಗದೀಶ್ ರಿಲೀಸ್
ಕೊಲೆ ಕೇಸ್ನಲ್ಲಿ ಜಾಮೀನು ಸಿಕ್ಕರೂ ಕೂಡ ಇಷ್ಟು ದಿನ ಜಗದೀಶ್ಗೆ ಶ್ಯೂರಿಟಿ ಸಿಕ್ಕಿರಲಿಲ್ಲ. ಹಾಗಾಗಿ ಜಾಮೀನು ಸಿಕ್ಕು 6 ದಿನ ಕಳೆದವರೆಗೂ ಜೈಲಲ್ಲೇ ಜಗದೀಶ್ ಕಾಲ ಕಳೆಯಬೇಕಾಯಿತು. ಇಂದು (ಡಿ.18) ಜಗದೀಶ್ನ ಬಿಡುಗಡೆ ಮಾಡಲಾಯಿತು. ಅವರ ಸಹೋದರಿ ಬಂದು ಕಾರಿನಲ್ಲಿ ಕರೆದುಕೊಂಡು ಹೋದರು. ಆ ಸಂದರ್ಭದ ವಿಡಿಯೋ ಇಲ್ಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ 6ನೇ ಆರೋಪಿ ಜಗದೀಶ್ ರಿಲೀಸ್ ಆಗಿದ್ದಾರೆ. ಶಿವಮೊಗ್ಗದ ಕೇಂದ್ರ ಕಾರಾಗೃಹದಿಂದ ಜಗದೀಶ್ ಬಿಡುಗಡೆ ಆಗಿದೆ. ಆಗಸ್ಟ್ 29ರಂದು ಶಿವಮೊಗ್ಗ ಜೈಲಿಗೆ ಜಗದೀಶ್ನನ್ನು ಸ್ಥಳಾಂತರ ಮಾಡಲಾಗಿತ್ತು. ಇತ್ತೀಚೆಗೆ ಜಗದೀಶ್ಗೆ ಜಾಮೀನು ನೀಡಲಾಗಿತ್ತು. ಶ್ಯೂರಿಟಿ ಸಿಗದ ಹಿನ್ನೆಲೆ ರಿಲೀಸ್ ವಿಳಂಬವಾಗಿತ್ತು. 6 ದಿನಗಳ ನಂತರ ಜೈಲಿನಿಂದ ಹೊರಗೆ ಬಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us