ಕಲಬುರಗಿಯಲ್ಲಿ ಮಾಜಿ ಸೈನಿಕನ ಬರ್ಬರ ಹತ್ಯೆ: ಆಗಿದ್ದೇನು?
ನಿವೃತ್ತ ಸೈನಿಕನ ತಲೆಗೆ ಕಬ್ಬಿಣ್ಣದ ರಾಡ್ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕಲಬುರಗಿಯ ರಾಮಮಂದಿರ ಬಳಿ ನಡೆದಿದೆ. 4 ವರ್ಷದ ಹಿಂದೆ ಬಿಎಸ್ಎಫ್ನಿಂದ ನಿವೃತ್ತಿಯಾಗಿದ್ದ ರವಿಚಂದ್ರ ಖೇಡ್(45) ಕೊಲೆಯಾದ ಮಾಜಿ ಸೈನಿಕ. ಇಂಡಿಯನ್ ಆಯಿಲ್ ಡಿಪೋದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಹಡಲಗಿ ಗ್ರಾಮದ ನಿವಾಸಿ ರವಿಚಂದ್ರ ಖೇಡ್ ನನ್ನು ವಿವಾದಿತ ಜಾಗದ ಸಂಬಂಧ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕಲಬುರಗಿ, (ಮೇ 17): ನಿವೃತ್ತ ಸೈನಿಕನ (retired BSF soldier) ತಲೆಗೆ ಕಬ್ಬಿಣ್ಣದ ರಾಡ್ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕಲಬುರಗಿಯ (Kalaburagi) ರಾಮಮಂದಿರ ಬಳಿ ನಡೆದಿದೆ. 4 ವರ್ಷದ ಹಿಂದೆ ಬಿಎಸ್ಎಫ್ನಿಂದ ನಿವೃತ್ತಿಯಾಗಿದ್ದ ರವಿಚಂದ್ರ ಖೇಡ್(45) ಕೊಲೆಯಾದ ಮಾಜಿ ಸೈನಿಕ. ಇಂಡಿಯನ್ ಆಯಿಲ್ ಡಿಪೋದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಹಡಲಗಿ ಗ್ರಾಮದ ನಿವಾಸಿ ರವಿಚಂದ್ರ ಖೇಡ್ ನನ್ನು ವಿವಾದಿತ ಜಾಗದ ಸಂಬಂಧ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ವಿವಾದಿತ ಜಾಗದಲ್ಲಿ ಕಳೆದ ತಿಂಗಳು ಟಿನ್ಶೆಡ್ ನಿರ್ಮಿಸಲಾಗಿತ್ತು. ಅದನ್ನು ವಿರೋಧಿ ರಾತ್ರೋರಾತ್ರಿ ಜೆಸಿಬಿಯಿಂದ ಕೆಡವಲಾಗಿತ್ತು. ಇದೇ ವಿಚಾರಕ್ಕೆ ವಿವಾದಿತ ಖಾಸಗಿ ಜಾಗದಲ್ಲೇ ರವಿಚಂದ್ರ ಖೇಡ್ ನನ್ನು ಹತ್ಯೆ ಮಾಡಲಾಗಿದೆ. ಈ ಬಗ್ಗೆ ಹತ್ಯೆಯಾದ ರವಿಚಂದ್ರ ಖೇಡ್ ಪತ್ನಿ ಕಣ್ಣೀರಿನೊಂದಿಗೆ ಘಟನೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
Loading...
Unable to load recommendations.
Follow Us
