ದರ್ಶನ್ ಮತ್ತು ವಿಲ್ಸನ್ ಗಾರ್ಡನ್ ನಾಗನ ನಡುವೆ ಸ್ನೇಹ ಕುದುರಿದ ಹಿಂದಿದೆ ಹಣದ ಡೀಲ್!

|

Updated on: Aug 30, 2024 | 11:10 AM

ತನ್ನ ಜೊತೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಹತ್ತು ಜನಕ್ಕೆ ಪ್ರತಿ ತಿಂಗಳು ತಲಾ ₹ 25,000 ಹಣ ಸಿಗುವ ವ್ಯವಸ್ಥೆಯನ್ನು ದರ್ಶನ್ ಅಣತಿ ಮೇರೆಗೆ ವಿಲ್ಸನ್ ಗಾರ್ಡನ್ ನಾಗ ಮಾಡಿದ್ದನಂತೆ. ಅಂದರೆ ದರ್ಶನ್ ತನ್ನ ಆಪ್ತರ ಮೂಲಕ ನಾಗನ ಆಪ್ತರಿಗೆ ಹಣ ಸಂದಾಯವಾಗುವಂತೆ ಫೋನಲ್ಲಿ ಹೇಳುತ್ತಿದ್ದರು!

ಬೆಂಗಳೂರು: ನಗರದ ಸೆಂಟ್ರಲ್ ಜೈಲಿನಲ್ಲಿ ಬೇರೆ ಬೇರೆ ಕೊಲೆ ಪ್ರಕರಣಗಳಲ್ಲಿ ಅರೋಪಿಗಳಾಗಿರುವ ನಟ ದರ್ಶನ್ ಮತ್ತು ಕುಖ್ಯಾತ ಹ್ಯಾಬಿಚುಯಲ್ ಅಫೆಂಡರ್ ವಿಲ್ಸನ್ ಗಾರ್ಡನ್ ನಾಗನ ನಡುವೆ ಬೆಳೆದ ದೋಸ್ತಿ ಹಿಂದೆ ದೊಡ್ಡ ಕಹಾನಿ ಇದೆ ಮತ್ತು ದೊಡ್ಡ ಮೊತ್ತದ ಹಣ ಕೂಡ ಕೈ ಬದಲಾಗಿದೆ. ದರ್ಶನ್ ಗೆ ಜೈಲಿನ ಒಳಗೆ ಎಲ್ಲ ಸವಲತ್ತು ಪಡೆಯುವ ಮತ್ತು ಕೊಲೆ ಆರೋಪದಿಂದ ಮುಕ್ತ ಮಾಡುವ ಡೀಲ್ ನಾಗನ ಜೊತೆ ನಡೆದಿತ್ತಂತೆ. ವಿವರವಾದ ವರದಿ ಇಲ್ಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಪತ್ನಿ ಭೇಟಿ ಬಳಿಕ ದರ್ಶನ್ ಓಡುತ್ತಿದ್ದುದು ವಿಲ್ಸನ್ ​ಗಾರ್ಡನ್​ ನಾಗನ ಬಳಿ; ಕಾರಣವೇನು?

Follow us on